December 31, 2007

ಶಿಕ್ಷೆಯಲ್ಲಿ ಅರ್ಧ ತಾಯಿಗೆ

ಮೊನ್ನೆ ಅಕ್ಕನ ಜೊತೆ ಮಾತಾಡ್ತಾ ಇದ್ದೆ, gtalk ನಲ್ಲಿ. ಅಕ್ಕ ಅಂದರೆ ನನ್ನ ದೊಡ್ಡಮ್ಮನ ಮಗಳು. ಆದರೆ ಅವಳು ನನ್ನ ಸ್ವಂತ ಅಕ್ಕನಂತೆಯೇ. ಅಕ್ಕ ತಂಗಿಯರು ಮಾತಾಡಲು ತೊಡಗಿದರೆ ಪ್ರಪಂಚದ ಅರಿವೇ ಇರುವುದಿಲ್ಲ ಅನ್ನುವುದಂತೂ ಸತ್ಯ; ಅವರ ಸುದ್ದಿಗೆ ಕೊನೆ ಎನ್ನುವುದೇ ಇಲ್ಲ. ಹೀಗೆಯೇ ಕಷ್ಟ ಸುಖ ಮಾತನಾಡುತ್ತಿರುವಾಗ ಅವಳ ಮಗಳು ಬಂದು 'ಅಮ್ಮಾ, ಕುಡಿಯಲ್ಲೇ ಕೊಡೇ' ಎಂದು ಹೇಳಿದ್ದು ನನಗೆ ಇಲ್ಲಿಯವರೆಗೆ ಕೇಳಿಸಿತ್ತು. 'ಒಂದೆರಡು ನಿಮಿಷಗಳಲ್ಲಿ ಬರುತ್ತೇನೆ ತಾಳು' ಎಂದು ಹೇಳಿ ಎದ್ದು ಹೋದಳು ಅಕ್ಕ. Horlicks ಕೊಟ್ಟಿರಬೇಕು ಬಹುಶಃ. ತಿರುಗಿ ಬರುವಾಗ 'ದಿಶಾ, ನೀನು ಕುಡಿದ ಲೋಟ ತೊಳೆದು ಇಡು, ನಿನ್ನ ಬಟ್ಟೆ ತೊಳೆದು ಹಾಕಿದ್ದೇನೆ ಒಣಗಿದೆಯಾ ನೋಡಿ ಮಡಿಸಿ ಇಡು ಮತ್ತು ನಿನ್ನ ರೂಮ್ ಕ್ಲೀನ್ ಮಾಡಿ ಆಡಲು ಹೋಗು' ಎಂದು ಹೇಳುತ್ತಾ ಬಂದಿದ್ದು ಕೇಳಿಸಿತು.

ಅವಳೂ ಕೆಲಸಕ್ಕೆ ಹೋಗಿ ಬರುವುದರಿಂದ ಸುಸ್ತಾಗಿರಬೇಕು ಅದಕ್ಕೆ ಮಗಳಿಗೆ ಕೆಲಸ ಹೇಳುತ್ತಿದ್ದಾಳೆ ಎಂದು ಅನಿಸಿದರೂ ಮತ್ತೆ ಮಾತಿಗೆ ತೊಡಗಿದ ತಕ್ಷಣ ನಾನು ಕೇಳಿದೆ, 'ಯಾಕೆ ಅನ್ನಕ್ಕಾ (ಅನುಪಮಾ ಅವಳ ಹೆಸರು) ದಿಶಾನ ಕೈಲಿ ಕೆಲಸ ಮಾಡಿಸುತ್ತಿದ್ದೀಯಾ, ನೀನೆ ಮಾಡಿದರೆ ಆಗದೇ? ಪಾಪ ಅವಳು'. ಅದಕ್ಕವಳು, 'ಅವಳೀಗೀಗ ಹನ್ನೆರಡು ವರ್ಷ. ನಿನಗೆ ಹನ್ನೆರಡು ವರ್ಷವಾಗಿದ್ದಾಗ ನಿನಗೆ ಅಡುಗೆಯನ್ನೂ ಮಾಡಲು ಬರುತ್ತಿತ್ತು ನೆನಪಿದೆಯಾ' ಎಂದಳು ಮತ್ತು ಮುಂದುವರಿಸಿದಳು 'ನೋಡು ನಿನ್ನ ಅಮ್ಮ ನಿನಗೆ ಎಲ್ಲ ಕೆಲಸಗಳನ್ನೂ ಕಲಿಸಿದ್ದಕ್ಕೆ ನಿನಗಿವತ್ತು ಜೀವನ ಸುಲಭ. ಅಮ್ಮಂದಿರು ಮಕ್ಕಳನ್ನು ಕೇವಲ ಮುದ್ದು ಮಾಡಿದರೆ ಸಾಲದು, ಮುಂದೆ ಅದರಿಂದ ಅವರಿಗೇ ಕಷ್ಟ. ಈಗ ನಾನು ಕಲಿಸಿದಷ್ಟೂ ಮುಂದೆ ಅವಳಿಗೇ ಲಾಭ. ಮುಂದೆಲ್ಲಾ ಜೀವನ ಯುದ್ಧದಂತೆಯೇ, the more you sweat in peace, the less you bleed in war… ಅದಕ್ಕಾಗಿ ಹೀಗೆ.’

ಹಾಗೆಯೇ short ಆಗಿ sweet ಆಗಿ ಒಂದು ನೀತಿ ಕಥೆಯನ್ನೂ ಹೇಳಿದಳು. ಹಾಗೆಯೇ ಸ್ವಲ್ಪ ಓದಿ ಬಿಡಿ.
ಒಬ್ಬ ಕಳ್ಳನನ್ನು ನ್ಯಾಯಾಲಯಕ್ಕೆ ತಂದು ಕಟಕಟೆಯಲ್ಲಿ ನಿಲ್ಲಿಸಿದ್ದರು,ಯಾವುದೋ ಒಂದು ದೊಡ್ಡ ಕಳ್ಳತನದ ಆಪಾದನೆಯಲ್ಲಿ. ವಿಚಾರಣೆಯ ನಂತರ ಅವನಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. Judge ಅವನ ಬಳಿ, 'ನೀನೇನಾದರೂ ಹೇಳುವುದಿದೆಯಾ?' ಎಂದು ಕೇಳಿದರು. ಆಗ ಆ ಕಳ್ಳ, 'ಮಾಹಾಸ್ವಾಮಿ, ನನಗೆ ಕೊಟ್ಟ ಎಂಟು ವರ್ಷಗಳ ಜೈಲು ಶಿಕ್ಷೆಯಲ್ಲಿ ನಾಲ್ಕು ವರ್ಷಗಳ ಶಿಕ್ಷೆಯನ್ನು ನನ್ನ ತಾಯಿಗೆ ಕೊಡಿ' ಎಂದನು. ಇಡೀ ನ್ಯಾಯಾಲಯ ಒಮ್ಮೆ ಸ್ತಬ್ಧವಾಯಿತು. Judge ಕೂಡ ಆಶ್ಚರ್ಯದಿಂದ ಕೇಳಿದರು, 'ಹೀಗೇಕೆ?' ಅದಕ್ಕವನು,'ಬಾಲ್ಯದಲ್ಲಿ ನನ್ನ ತಾಯಿ ನನ್ನನ್ನು ಸರಿಯಾಗಿ ಬೆಳೆಸಲಿಲ್ಲ. ನಾನು ಮೂರನೇ ತರಗತಿಯಲ್ಲಿದ್ದಾಗ ಪೆನ್ಸಿಲ್ ಕದ್ದೆ. ಅಪ್ಪ ಬೈದರೂ ಅಮ್ಮ ನನ್ನ ಪರವಹಿಸಿದಳು. ಒಂಭತ್ತನೇ ತರಗತಿಯಲ್ಲಿದ್ದಾಗ ಸೈಕಲ್ ಕದ್ದೆ. ಅಪ್ಪ ಶಿಕ್ಷೆ ಕೊಡಲು ಮುಂದಾದರೂ ಅಮ್ಮ ನನ್ನ ಪರವಾಗಿ ಮಾತನಾಡಿದಳು. ನಾನು ಅದರ ಲಾಭ ಪಡೆಯುತ್ತಾ ಹೋದೆ. ಅಂದು ಅಪ್ಪನಂತೆಯೇ ಅಮ್ಮನೂ ನನ್ನನ್ನು ಶಿಕ್ಷಿಸಲು ಮುಂದಾಗಿದ್ದರೆ ಇಂದು ನಾನು ಹೀಗಾಗುತ್ತಿರಲಿಲ್ಲ. ಆದ್ದರಿಂದ ನನ್ನ ಶಿಕ್ಷೆಯಲ್ಲಿ ಅರ್ಧ ಅವಳಿಗೇ ಸಲ್ಲಬೇಕು' ಅಂದನಂತೆ.

ಅಕ್ಕ ಹೇಳುತ್ತಿದ್ದ ಕಥೆ ಮುಗಿಯಿತು. ಮುಂದೆ ಏನೇನೋ ಮಾತನಾಡಿದೆವು. ಆದರೆ ಅಕ್ಕ ಹೇಳಿದ ಕಥೆ ಏಕೋ ಮನಸ್ಸಿಗೆ ನಾಟಿತ್ತು. ಆಗೆಯೇ ನನ್ನನ್ನು ಸ್ವಾವಲಾಂಬಿಯಾಗಿ ಬೆಳೆಸಿದ ಅಪ್ಪ, ಅಮ್ಮನ ನೆನಪೂ ಆಗದೇ ಇರಲಿಲ್ಲ. ನಾನು ಹಾಗೆಯೇ ಯೋಚಿಸುತ್ತಾ ಒಮ್ಮೆ ಭೂತ ಕಾಲಕ್ಕೆ ಹೋಗಿ ಬಂದೆ. ನಮ್ಮ ಪ್ರತಿಯೊಂದು ಕೆಲಸವನ್ನೂ ನಾವೇ ಮಾಡಿಕೊಳ್ಳಬೇಕು ಎನ್ನುತ್ತಿದ್ದರು ಅಪ್ಪ, ಅಮ್ಮ. ನನ್ನ ಮತ್ತು ನನ್ನ ತಮ್ಮನ college admission ಕೂಡ ನಾವೇ ಮಾಡಿಕೊಂಡ ನೆನಪು. ಆಗೆಲ್ಲಾ ಅಪ್ಪ, ಅಮ್ಮನ ಮೇಲೆ ಸಿಟ್ಟು ಬರುತ್ತಿದ್ದುದು ನಿಜ. ಆದರೆ ನಂತರದ ದಿನಗಳಲ್ಲಿ ಅವರೇಕೆ ಹಾಗೆ ಮಾಡಿದರು ಎಂಬುದು ಅರ್ಥವಾಗುತ್ತಾ ಹೋಯಿತು. ನಮಗೆ ಈಗಿರುವ ಸ್ವಾಭಿಮಾನ, ಆತ್ಮವಿಶ್ವಾಸಕ್ಕೆಲ್ಲಾ ಕಾರಣ ಅಪ್ಪ, ಅಮ್ಮ ನಮ್ಮನ್ನು ಬೆಳೆಸಿದ ರೀತಿ. ಅಕ್ಕನಿಗೆ ನನಗಿಂತ ಮೊದಲೇ ಈ ವಿಷಯಗಳೆಲ್ಲಾ ಅರ್ಥವಾಗಿದ್ದಿರಬೇಕು, ಅದಕ್ಕೇ ಈಗ ತನ್ನ ಜೀವನದಲ್ಲೂ ಆಚರಣೆಗೆ ತಂದಿದ್ದಾಳೆ, ತನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸುತ್ತಿದ್ದಾಳೆ.

ಮುದುಕಿಯ ತುಪ್ಪ … (ಉತ್ತರ ಕನ್ನಡದ ಗಾದೆ – 119)

ಮುದುಕಿಯ ತುಪ್ಪ ಮೂಸಿ ನೋಡಿಯೇ ಖರ್ಚಾಗಿತ್ತು.

ಮುದುಕಿಯ ಬಳಿ ಇರುವುದೇ ಸ್ವಲ್ಪ ತುಪ್ಪ. ಅದು ಮೂಸಿ ನೋಡಿಯೇ ಖರ್ಚಾಗುತ್ತದೆ. (ನಿಜವಾಗಿ ಮೂಸಿ ನೋಡಿದರೆ ಖರ್ಚೇನೂ ಆಗುವುದಿಲ್ಲ. ಆದರೂ ಹಾಗೆ ಹೇಳುತ್ತಾರೆ.)

ಸ್ವಲ್ಪವೇ ಇರುವ ವಸ್ತು ಪರೀಕ್ಷೆಗೊಳಪಟ್ಟೇ ಖರ್ಚಾಗುತ್ತದೆ ಎಂಬ ಸಂದರ್ಭವಿದ್ದಾಗ ಈ ಮಾತನ್ನು ಉಪಯೋಗಿಸಬಹುದು. ಹೊಸ ತಿಂಡಿ ಮಾಡುವಾಗ ಸ್ವಲ್ಪವೇ ಮಾಡುತ್ತಿದ್ದು, ಅದು ಸರಿಯಾಗಿದೆಯಾ ಎಂದು ರುಚಿ ನೋಡಿಯೇ ಅರ್ಧ ಮುಗಿದಿರುತ್ತದೆ! ಅಂತ ಸಂಧರ್ಭದಲ್ಲಿ ಈ ಮಾತನ್ನು ಬಳಸಬಹುದು.

December 28, 2007

What did I like the most in Tokyo?

Yesterday I was talking to my friend over phone. She asked me ‘did you like Japan?’ ‘Yes’ I told her. The next question she shot was totally unexpected for me. ‘Which thing in Japan did you like the most?’ As you know, that which is in mind comes out unknowingly. That is what happed with me yesterday. Suddenly I replied ‘garbage management’. She exclaimed ‘what?!!!’ Of course I like many other qualities of Japan and Japanese. But I don’t know somehow I like their garbage management a lot…. may be because I used to think a lot on the matter that even educated people littering the streets and about their mismanagement of garbage. Just for your information I am briefing the system of garbage management here in Tokyo. Hope you find it interesting just as I did. Every house will have a paper pasted on the wall. It reads something like this…

Could you please separate the garbage by the rules?

1. Plastic wrapping materials (Empty bottles of sauces, detergents, shampoos etc, cups of instant noodles, yogurt, jelly etc, shopping bag etc.)
Collected every Monday
Please use a designated bag for ‘plastic wrapping materials’.*
Please empty the contents and wash inside.

2. Empty bottles and cans
Collected every Friday
Please wash the inside and put them in separate bags, either designated bag or transparent/ semi transparent bag.
Papers and cloth- collected every Friday

3. Newspapers, magazines, cardboard boxes, paper packages, clothes
Collected every Friday
Pleas tie up as per each item.
Please avoid placing them on a rainy day.

4. Burnable garbage (Kitchen garbage- food scrap and leftovers, leather goods, synthetic leather goods, video tapes, CDs, cassette tapes, paper diapers, refrigerated materials etc.)
Collected every Tuesday, Thursday and Saturday
Please use designated green bag for ‘burnable’.
For kitchen garbage, please drain water.
For oil, please soak into paper or cloth or harden.

5. Non-burnable garbage (Pans, kettles, glass wares, China wares, umbrellas, knives, mirrors, pots, cosmetic bottles etc.)
Collected every Wednesday
Please use the designated bag for ‘non burnable’.
For broken glasses and knives, please wrap with a paper and indicate danger on the bag.

6. Harmful garbage (Dry batteries, fluorescent lamps, mercury thermometers)
Collected every Wednesday
Please do not put harmful garbage together with non burnable garbage.
Please wrap fluorescent lamps with paper and indicate danger on the bag.
Please put dry batteries and thermometers into a transparent bag.

7. Large sized garbage- Please call ……numbers for collection.

8. Household electrical appliances- They are not collectible. If you replace a current appliance with a new one, the purchase shop can take it with some charges.

Please keep the garbage at the garbage dump before 8 AM on the collection days.

Believe me; people separate the garbage according to the rules. Even we do! This may look tedious for the first time. But my experience says, with a little patience we can get adjusted to this system. I am sure all the developed countries must be following their own systematic way of garbage management. When I was in India, though I never used to throw anything on the road, I had never imagined that garbage can be managed so nicely, wisely to keep the surroundings clean.

* Designated garbage disposal bags are available in the market.

ಹೋದರೆ ಒಂದು ಕಲ್ಲು… (ಉತ್ತರ ಕನ್ನಡದ ಗಾದೆ – 118)

ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು.

ಒಂದು ಕಲ್ಲನ್ನು ಎಸೆಯುವುದು. ಒಂದು ವೇಳೆ ಗುರಿ ತಾಗಿದರೆ, ಅದೃಷ್ಟವಿದ್ದರೆ ಮೂರು ಹಣ್ಣು ಬಿದ್ದರೂ ಬೀಳಬಹುದು. ಇಲ್ಲವಾದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ, ಒಂದು ಕಲ್ಲು ತಾನೇ.

ಯಾವುದೋ ಒಂದು ಕೆಲಸಕ್ಕಾಗಿ ಅಥವಾ ವಸ್ತುವಿಗಾಗಿ ಇನ್ನೊಬ್ಬರನ್ನು ಕೇಳುವ ಅವಕಾಶವಿದ್ದರೆ ಕೇಳುವುದು. ಅದು ಒಂದು ಪ್ರಯತ್ನವಷ್ಟೇ. ಸಿಕ್ಕಿದರೆ ಅದೇ ಲಾಭ; ಇಲ್ಲವಾದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಸಂದರ್ಭದಲ್ಲಿ ಉಪಯೋಗಿಸಿ.

December 27, 2007

Two monks and a beautiful woman

Two monks were wandering through the forest when they came upon a beautiful courtesan standing on the banks of a flooded stream. Because they had sworn a vow of chastity, the younger monk ignored the woman and crossed the stream quickly.
Realising that the beautiful woman could not safely cross the stream by herself, the older monk gathered her up in his arms and carried her across the stream. Once they had reached the other side, he gently returned her to the ground. She smiled her thanks, and the two monks continued on their way.

The young monk quietly seethed as he replayed the incident again and again in his own mind. How could he? The young monk thought angrily to himself. Does our vow of chastity mean nothing to him? The more the young monk thought about what he had seen, the angrier he became, and the argument in his head grew louder: Why, had I done such a thing I would have been thrown out of our order. This is disgusting. I may not have been a monk as long as he has, but I know right from wrong.

He looked over at the older monk to see if he at least was showing remorse for what he had done, but the man seemed as serene and peaceful as ever. Finally, the young monk could stand it no longer. ‘How could you do that?’ he demanded. ‘How could you even look at that woman, let alone pick her up and carry her? Do you remember your vow of chastity?’

The older monk looked surprised, and then smiled with great kindness in his eyes.
‘I am no longer carrying her, brother. Are you?'


The story has made me think about all the unnecessary things I am carrying with me. How about you?

Taken from- Paul McKenna (2004), Change Your Life in 7 Days, Bantham Press, London, pp. 51-2.

ಮುರುಕು ಮಂಚ … (ಉತ್ತರ ಕನ್ನಡದ ಗಾದೆ – 117)

ಮುರುಕು ಮಂಚ ಹೊತ್ತು ದನ ಕಾಯುತ್ತೀಯಾ ಅಥವಾ ಒಡಕು ಗಡಿಗೆಯಲ್ಲಿ ನೀರು ತರುತ್ತೀಯಾ?

ಒಂದೇ ಮುರುಕು ಮಂಚವನ್ನು ಹೊತ್ತುಕೊಂಡು ದನಗಳನ್ನು (ಹಸುಗಳು) ಕಾಯಬೇಕು. ದನಗಳು ಎಲ್ಲಿ ಓಡಿದರೂ ಆ ಮಂಚವನ್ನು ಹೊತ್ತುಕೊಂಡೇ ಓಡಬೇಕು. ಇಲ್ಲವಾದರೆ ಒಡಕು ಗಡಿಗೆಯಲ್ಲಿ ನೀರನ್ನು ಹೊತ್ತು ತರಬೇಕು. ತರುವಷ್ಟರಲ್ಲಿ ಅರ್ಧ ನೀರು ಸೋರಿ ಹೋಗುತ್ತದೆ. ಪುನಃ ತರಬೇಕು.

ಯಾವ ಕೆಲಸವನ್ನು ಆರಿಸಿಕೊಂಡರೂ ಕಷ್ಟ ಇದ್ದಿದ್ದೇ. ಕಷ್ಟಕರವಾದ ಕೆಲಸಗಳ ನಡುವೆ ಆಯ್ಕೆ ಬಂದಾಗ ಈ ಮಾತನ್ನು ನಿಮಗೆ ನೀವೇ ಹೇಳಿಕೊಳ್ಳಬಹುದು. ಮುರುಕು ಮಂಚವನ್ನು ಒಂದು ಕಡೆ ಇಟ್ಟು ದನ ಕಾಯ್ದರೆ ಆಗದೇ, ಹೊತ್ತುಕೊಂಡೇ ಏಕೆ ಕಾಯಬೇಕು ಎಂದು ಕೇಳಬೇಡಿ. ನನಗೂ ಗೊತ್ತಿಲ್ಲ. ಕಷ್ಟಕರವಾದ ಕೆಲಸ ಎಂದು ಹೇಳಲು ಹಾಗೆ ಬಳಸಿದ್ದಾರೆ ಎಂದು ಅನಿಸುತ್ತದೆ.

December 26, 2007

ಹೆಣ ಸುಡುವ ಬೆಂಕಿಯಲ್ಲಿ … (ಉತ್ತರ ಕನ್ನಡದ ಗಾದೆ – 115 ಮತ್ತು 116)

ಹೆಣ ಸುಡುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವನು.

ಸುಮ್ಮನೇ ಏಕೆ ಒಂದು ಕಡ್ಡಿ ಗೀರಿ ಖರ್ಚು ಮಾಡಲಿ ಎಂದು ಅವನು ಹೆಣ ಸುಡುತ್ತಿರುವ ಬೆಂಕಿಯಲ್ಲೇ ಬೀಡಿಯನ್ನು ಹೊತ್ತಿಸಿಕೊಳ್ಳುತ್ತಾನೆ. ಹೆಣ ಸುಡುತ್ತಿರುವ ಬೆಂಕಿ ಎಂಬ ಭಾವನೆಯೂ ಕೂಡ ಅವನನ್ನು ಬಾಧಿಸುವುದಿಲ್ಲ. ತಮ್ಮ ಜಿಪುಣತನದಲ್ಲಿ ಭಾವನೆಗಳಿಗೂ ಕೂಡ ಬೆಲೆ ಕೊಡದವರು ಇವರು. ಅಂತಹ ಜಿಪುಣರನ್ನು ಕುರಿತು ಈ ಗಾದೆಯನ್ನು ಹೇಳಿ.

ಇನ್ನೂ ಸ್ವಲ್ಪ ಕಡಿಮೆ ಜಿಪುಣತನವನ್ನು ತೋರಿಸುವ ಕೆಲವರಿರುತ್ತಾರೆ. ಅಂಥವರನ್ನು ಕುರಿತು ಎಂಜಲು ಕೈಯ್ಯಲ್ಲಿ ಕಾಗೆಯನ್ನೂ ಓಡಿಸದವರು ಎಂದು ಹೇಳಬಹುದು. ಏಕೆಂದರೆ ಕಾಗೆಗೆ ಎಲ್ಲಿಯಾದರೂ ಒಂದೆರಡು ಅಗುಳು ಅನ್ನ ಸಿಕ್ಕಿಬಿಟ್ಟೀತೆಂಬ ಜಿಪುಣತನದಿಂದ.

December 25, 2007

ಹೊಟ್ಟೆಗಿಲ್ಲದ ಶಾನುಭೋಗ … (ಉತ್ತರ ಕನ್ನಡದ ಗಾದೆ – 113 ಮತ್ತು 114)

ಹೊಟ್ಟೆಗಿಲ್ಲದ ಶಾನುಭೋಗ ಹಳೆ ಕಡತ ಮಗುಚಿದ್ದನು.

ಆ ಶಾನುಭೋಗನಿಗೆ ಹೊಟ್ಟೆಗಿಲ್ಲ. ಅದಕ್ಕಾಗಿ ಅವನು ಹಳೆಯ ಕಡತಗಳನ್ನೆಲ್ಲಾ ತಿರುವಿ ಹಾಕುತ್ತಿದ್ದಾನೆ, ಏಕೆಂದರೆ ಯಾವುದಾದರೂ ಒಬ್ಬ ವ್ಯಕ್ತಿಯಿಂದ ಏನಾದರೂ ಬರಬೇಕಿದ್ದ ಬಾಕಿ ಸಂದಾಯ ಒಂದು ವೇಳೆ ತಪ್ಪಿ ಉಳಿದುಬಿಟ್ಟಿದ್ದರೆ ಅವನನ್ನು ಬೆದರಿಸಿ ಕೊಡಬೇಕಾಗಿರುವ ಬಾಕಿಯ ಜೊತೆಗೆ ತಾನೂ ಸ್ವಲ್ಪ ಲಂಚ ತೆಗೆದುಕೊಳ್ಳಬಹುದು ಎಂಬ ಆಸೆಯಿಂದ.

ಮಾಡಲು ಏನೂ ಕೆಲಸವಿಲ್ಲದಿದ್ದಾಗ ಇನ್ನೊಬ್ಬನಿಂದ ಏನಾದರೂ ಕಿತ್ತುಕೊಳ್ಳಲು (ಅಥವಾ ನಿಜವಾಗಿಯೂ ಬರಬೇಕಾದ್ದನ್ನು ಪಡೆದುಕೊಳ್ಳಲು) ಯೋಜನೆ ಹಾಕುವ ಸಲುವಾಗಿ ಇದ್ದ ಬಿದ್ದ ಕಾಗದ, ರಸೀತಿಗಳನ್ನೆಲ್ಲಾ ಹರಡಿಕೊಂಡು ಹುಡುಕುವ ಅಭ್ಯಾಸ ಕೆಲವರಿಗಿರುತ್ತದೆ. ಅಂಥವರನ್ನು ಕುರಿತಾದ ಮಾತು ಇದು.

ಇನ್ನೂ ಒಂದು ಬಗೆಯ ಜನರಿರುತ್ತಾರೆ. ಅವರಿಗೆ ಮಾಡಲು ಏನೂ ಕೆಲಸವಿಲ್ಲದಿದ್ದಾಗ ಹೊಸ ಕೆಲಸ ಹುಡುಕಿಕೊಂಡು ಮಾಡಲು ಹೋಗಿ ಅನಾಹುತವನ್ನೇ ಮಾಡಿ ಬಿಟ್ಟಿರುತ್ತಾರೆ.ಅಂಥವರ ಬಗ್ಗೆ ಹೇಳುವ ಮಾತೆಂದರೆ- ಉದ್ಯೋಗ ಇಲ್ಲದ ಆಚಾರಿ ಮಗನ ಹಿಂಭಾಗವನ್ನು ಕೆತ್ತಿ ಮೂರು ಮಣೆ ಮಾಡಿದ್ದನಂತೆ.

December 24, 2007

ಎಣ್ಣೆ ಬರುವ ಹೊತ್ತಿಗೆ … (ಉತ್ತರ ಕನ್ನಡದ ಗಾದೆ – 112)

ಎಣ್ಣೆ ಬರುವ ಹೊತ್ತಿಗೆ ಕಣ್ಣು ಮುಚ್ಚಿಕೊಂಡಿದ್ದನು.

ಎಣ್ಣೆ ಗಾಣದಲ್ಲಿ ರಾತ್ರಿ ಕೆಲಸ ಮಾಡುತ್ತಿರುವಾಗ, ಇಡೀ ರಾತ್ರಿ ಕೆಲಸ ಮಾಡಿ ಸುಸ್ತಾಗಿರುತ್ತದೆ, ತಾಳ್ಮೆ ಹೊರಟು ಹೋಗಿರುತ್ತದೆ.
ಕಣ್ಣ ತುಂಬಾ ನಿದ್ರೆಯೂ ಬಂದಿರುತ್ತದೆ. ಇನ್ನೇನು ಗಾಣದಿಂದ ಎಣ್ಣೆ ಬೀಳಬೇಕೆನ್ನುವಷ್ಟರಲ್ಲಿ ಒಂದು ಕ್ಷಣ ಕಣ್ಣು ಮುಚ್ಚಿಹೋಗುತ್ತದೆ.
ಎಣ್ಣೆ ಪಾತ್ರೆಯಲ್ಲಿ ಬೀಳದೇ ಇನ್ನೆಲ್ಲೋ ಬಿದ್ದು ಹೋಗುತ್ತದೆ. ಎಷ್ಟೋ ಹೊತ್ತಿನಿಂದ ಪಟ್ಟ ಶ್ರಮ ವ್ಯರ್ಥವಾಗುತ್ತದೆ.

ಪ್ರತಿಫಲದ ನಿರೀಕ್ಷೆಯಲ್ಲಿ ಯಾವುದೋ ಕೆಲಸವನ್ನು ಬಹಳ ಶ್ರಮವಹಿಸಿ ಮಾಡಿ ಇನ್ನೇನು ಪ್ರತಿಫಲ ಸಿಗುವುದರಲ್ಲಿದೆ ಎನ್ನುವಾಗ ತಾಳ್ಮೆ ಕಳೆದುಕೊಂಡು ಆ ಕೆಲಸವನ್ನು ಬಿಟ್ಟು ಬಿಡುವವರನ್ನು ಕುರಿತು ಈ ಗಾದೆಯನ್ನು ಹೇಳುತ್ತಾರೆ.

December 23, 2007

ಅಕ್ಕ ತಂಗಿಯರು … (ಉತ್ತರ ಕನ್ನಡದ ಗಾದೆ – 111)

ಅಕ್ಕ ತಂಗಿಯರು ಕಾಶಿಗೆ ಹೋದಂತೆ.

ಇದು ಕೇಳಲು ಗಾದೆ ಮಾತಿನಂತೆ ಅನಿಸದಿದ್ದರೂ ಇದನ್ನು ಗಾದೆ ಮಾತಿನಂತೆ ಉಪಯೋಗಿಸುತ್ತಾರೆ. ನೂರಾರು ವರ್ಷಗಳ ಹಿಂದೆ ಅಕ್ಕ ತಂಗಿಯರು ಕಾಶಿಗೆ ಹೋಗಿದ್ದರಂತೆ. ವಾಹನಗಳು ಇರದಿದ್ದ ಕಾಲ. ನಡೆದುಕೊಂಡೇ ಹೋಗಿ ನಡೆದುಕೊಂಡೇ ಬಂದರು. ಹೋಗುವಾಗ, ಬರುವಾಗ ಸುದ್ದಿ ಹೇಳುತ್ತಲೇ ಇದ್ದಿರಬೇಕು, ಸುಮ್ಮನಂತೂ ಇದ್ದಿರಲಿಕ್ಕಿಲ್ಲ. ಹಿಂದಿರುಗಿ ಬಂದ ಮೇಲೆ ತಂಗಿಯ ಮನೆ ಮೊದಲು ಸಿಕ್ಕಿತು. ರಾತ್ರಿಯಾಗಿರುವುದರಿಂದ ಅಕ್ಕ ತಂಗಿಯ ಮನೆಯಲ್ಲೇ ಉಳಿದಳು. ರಾತ್ರಿಯಿಡೀ ಕುಳಿತು ಇಬ್ಬರೂ ಸುದ್ದಿ ಹೇಳಿದರು. ಬೆಳಗಾದ ತಕ್ಷಣ ಅಕ್ಕ ತನ್ನ ಮನೆಗೆ ಹೊರಟಳು. ಆಗ ತಂಗಿ, 'ಅಕ್ಕಾ, ಒಂದೆರಡು ದಿನ ಪುರಸೊತ್ತು ಮಾಡಿಕೊಂಡು ನಮ್ಮನೆಗೆ ಉಳಿಯಲು ಬಾ. ನಿನ್ನ ಹತ್ತಿರ ತುಂಬಾ ಸುದ್ದಿ ಹೇಳುವುದಿದೆ' ಎಂದಳಂತೆ!

ನಾವೆಲ್ಲಾ cousins ಒಟ್ಟಿಗೆ ಸೇರಿದಾಗ ರಾತ್ರಿಯೆಲ್ಲಾ ಕುಳಿತು ಸುದ್ದಿ ಹೇಳುವುದುಂಟು. ಆಗ ನೋಡಿದವರು ಯಾರಾದರೂ, 'ಮುಗದ್ದಿಲ್ಯನ್ರೇ ಸುದ್ದಿ ಇನ್ನೂವಾ, ಅಕ್ಕ ತಂಗಿ ಕಾಶಿಗ್ ಹೋಗಿದಿದ್ವಡ' ಎಂದು ನಗುವುದುಂಟು.

December 21, 2007

ಮು0ಡೆಗೆ ಮು0ಡೆಯನ್ನು … (ಉತ್ತರ ಕನ್ನಡದ ಗಾದೆ – 110)

ಮು0ಡೆಗೆ ಮು0ಡೆಯನ್ನು ಕಂಡರೆ ಉಂಡಷ್ಟೇ ಸಂತೋಷ.

ಮು0ಡೆ ಎಂದರೆ ವಿಧವೆ. ಅವಳಿಗೆ ಇನ್ನೊಬ್ಬಳು ವಿಧವೆಯನ್ನು ಕಂಡರೆ ತುಂಬಾ ಸಂತೋಷವಾಗುತ್ತದೆ; ಏಕೆಂದರೆ ತನ್ನ ಕಷ್ಟಕ್ಕೆ ತಾನೊಬ್ಬಳೇ ಅಲ್ಲ, ತನ್ನಂತೆಯೇ ಇನ್ನೊಬ್ಬಳೂ ಇದ್ದಾಳೆ ಎನ್ನುವ ಮಾನಸಿಕ ಸಮಾಧಾನ ಸಿಗುವುದರಿಂದ.

ತನ್ನಂತೆಯೇ ಸಮಸ್ಯೆಯಲ್ಲಿ ಸಿಕ್ಕಿಕೊಂಡಿರುವ ಇನ್ನೊಬ್ಬನನ್ನು ನೋಡಿ ಸಮಾಧಾನ ಮಾಡಿಕೊಳ್ಳುವವರನ್ನು, ಸಂತೋಷಪಡುವವರನ್ನು ನೋಡಿ ಈ ಗಾದೆಯನ್ನು ಮಾಡಲಾಗಿದೆ. ಪರೀಕ್ಷೆಯಲ್ಲಿ ನಾವು ಬರೆಯದ ಉತ್ತರವನ್ನು ನಮ್ಮ ಸ್ನೇಹಿತರೂ ಬರೆಯದಿದ್ದಾಗ ಒಂಥರಾ ಸಮಾಧಾನವಾಗುತ್ತದೆಯಲ್ಲಾ ಅದಿರಬಹುದು ಬಹುಶಃ!

December 20, 2007

ಗಂಡನ ಮೊದಲ ಕರ್ತವ್ಯ

ಇದೂ ಕೂಡ ಮರೆಯಲಾರದ್ದು...
ನನ್ನ ಧರ್ಮಪತಿ (ಹೆಂಡತಿ ಧರ್ಮಪತ್ನಿಯಾದ ಮೇಲೆ ಗಂಡ...) ರಾಜೀವ ಅವರ ಸಹೋದ್ಯೋಗಿಗಳೆಲ್ಲಾ ಹೇಳುವಂತೆ ideal husband. ಆ ಮಾತನ್ನು ನಾನೂ ಒಪ್ಪಲೇ ಬೇಕು. ಅವರಷ್ಟು ಸಹನೆ ಇರುವವರನ್ನು ಇನ್ನೂ ತನಕ ನಾನು ನೋಡಿಲ್ಲ. ನಾನು ಕೆಲವೊಮ್ಮೆ ಜಗಳವಾಡಿ ಅವರಿಗೆ ಹೊಡೆದರೂ, ಉಗುರಿನಿಂದ ಪರಚಿದರೂ ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ, ನಾನು ಅವರಿಗಿಂತ ಚಿಕ್ಕವಳು ಎಂಬ ಒಂದೇ ಕಾರಣಕ್ಕಾಗಿ. ಸಿಟ್ಟು ಇಳಿದ ಮೇಲೆ ನಾನು, 'ನೀವೇಕೆ ನನ್ನನ್ನು ತಡೆಯಲಿಲ್ಲ' ಎಂದು ಕೇಳಿದರೆ, 'ಹೊಡೆಯುವಾಗ, ಪರಚುವಾಗ ನಿನಗೆ ಸಿಗುವ ಖುಷಿಯನ್ನು ನಾನು ತಡೆದಂತೆ ಆಗುತ್ತದೆ. ಅದಕ್ಕಾಗಿ ತಡೆಯಲಿಲ್ಲ' ಎನ್ನುತ್ತಾರೆ!

ಇದೇನು ಗಂಡನನ್ನು ಇಷ್ಟೊಂದು ಹೊಗಳುತ್ತಿದ್ದಾಳೆ ಎಂದುಕೊಳ್ಳದೇ ಮುಂದೆ ಓದಿ. ನನಗೆ ಇಷ್ಟಕ್ಕೇ ಸಮಾಧಾನವೆಲ್ಲಿ? ಒಮ್ಮೆ ಹೇಳುತ್ತಿದ್ದೆ, 'ನೋಡಿ ಉಳಿದವರೆಲ್ಲಾ ತಮ್ಮ ಹೆಂಡತಿಯರಿಗೆ ಹೊರಗಡೆಗೆ ಹೋಗಿ ಮಾಡಬೇಕಾದಂತ ಕೆಲಸಗಳನ್ನೆಲ್ಲಾ ಮಾಡಿಕೊಡುತ್ತಾರೆ, ನೀನೆ ಹೋಗಿ ನೋಡು, ಕಲಿತುಕೋ, ನೀನೆ try ಮಾಡು, explore ಮಾಡು ಎಂದೆಲ್ಲಾ ಹೇಳುವುದಿಲ್ಲ. ನೀವು ಮಾತ್ರ ನನ್ನನ್ನೇ ದೂಡುತ್ತೀರಿ. so very unkind of you' ಎಂದು.

ಆಗ ಅವರು ಹೇಳಿದ್ದರು,' ಅದು ಹಾಗಲ್ಲ, ಎಲ್ಲವನ್ನೂ ನೀನೆ ನಿಭಾಯಿಸುವಷ್ಟರ ಮಟ್ಟಿಗೆ ನೀನು ಸಶಕ್ತಳಿರಬೇಕು, ಎಲ್ಲವನ್ನೂ ಕಲಿತಿರಬೇಕು....ಹೆಂಡತಿಯನ್ನು ವೈಧವ್ಯಕ್ಕೆ ಸಿದ್ಧವಾಗಿಡುವುದೇ ಗಂಡನ ಪ್ರಪ್ರಥಮ ಕರ್ತವ್ಯ' ಮುಂದೆ ನನಗೆ ಮಾತಾಡಲೂ ಆಗಲಿಲ್ಲ. ಗಂಟಲು ಕಟ್ಟಿತ್ತು... ಮನಸ್ಸಿಗೆ ಹೌದೆನಿಸಿದರೂ ಹೃದಯ ಇನ್ನೊ ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಯೋಚಿಸಿದರೂ ಅನಿಸುತ್ತದೆ, ಅವರು ಹೇಳುವುದು ನಿಜ. ಆದರೆ ನನ್ನ ಯೋಚನೆಯೇ ಬೇರೆ. ಸಾವು ಬರುವಾಗ ಇಬ್ಬರಿಗೂ ಒಟ್ಟಿಗೆ ಬರಲಿ. ಇಲ್ಲವಾದರೆ ಅವರಿಗೆ ಮೊದಲು ಬರಲಿ. ಅವರಿಲ್ಲದೆ ನಾನು ಹೇಗೋ ಬದುಕಿಬಿಡಬಲ್ಲೆ, ಅವರ ನೆನಪಿನಲ್ಲೇ. ಆದರೆ ನಾನು ಇಲ್ಲವಾದರೆ ಅವರನ್ನು ಗಮನಿಸಲೂ ಯಾರೂ ಇರುವುದಿಲ್ಲ, ಅವರಿಗೆ ಅಂತ ಪರಿಸ್ಥಿತಿ ಬೇಡ.

ರಾಜೀವನಿಗೆ ವಿಶೇಷ ಸೂಚನೆ: ಹೋಗಳಿದ್ದೇನೆ, ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೇನೆಂದು ಅಳಿದುಳಿದ ಕೆಲಸಗಳಿಗೂ ನನ್ನನ್ನೇ ದೂಡುವಂತಿಲ್ಲ, ನಾನು ಮಾಡುವುದಿಲ್ಲ ಅಷ್ಟೇ! :)

ಹೆಂಡತಿ ಸತ್ತ ದುಃಖ… (ಉತ್ತರ ಕನ್ನಡದ ಗಾದೆ – 109)

ಹೆಂಡತಿ ಸತ್ತ ದುಃಖ, ಮೊಣಕೈ ಗಂಟಿನ ನೋವು ಬಹಳ ಕಾಲ ಇರುವುದಿಲ್ಲ.

ಮೊಣಕೈ ಗಂಟಿನ ತುದಿಗೆ ಏನಾದರೂ ತಾಗಿದಾಗ ಗಮನಿಸಿದ್ದೀರಾ? ಕರೆಂಟು ಹೊಡೆದಂತಾಗುತ್ತದೆ ಮತ್ತು ಒಂದು ಕ್ಷಣ ಜೀವವೇ ಹೋದಂತಾಗುತ್ತದೆ. ಸ್ವಲ್ಪವೇ ಹೊತ್ತಿನ ನಂತರ ಗಮನಿಸಿದರೆ ನೋವು ಮಾಯವಾಗಿರುತ್ತದೆ. ಅದರ ಬದಲು ಬೇರೆ ಅಂಗಗಳಿಗೆ ಏನಾದರೂ ತಾಗಿದರೆ ನೋವು ಅಷ್ಟು ಬೇಗ ಮಾಯವಾಗುವುದಿಲ್ಲ.

ಅಂತೆಯೇ ಹೆಂಡತಿ ಸತ್ತಾಗ ಗಂಡನಿಗೆ ಒಮ್ಮೆ ತುಂಬಾ ನೋವಾಗುತ್ತದೆ. ಜೀವವೇ ಹೋದಂತೆನಿಸುತ್ತದೆ. ಆದರೆ ಅಷ್ಟೇ ಬೇಗ ಆ ದುಃಖ ಮಾಯವಾಗಿಬಿಡುತ್ತದೆ. ಹೆಂಡತಿ ಸತ್ತಾಗ ಇನ್ನಿಲ್ಲದಂತೆ ದುಃಖಿಸಿ ನಂತರ ಎರಡೇ ತಿಂಗಳಲ್ಲಿ ಮರುಮದುವೆಯಾಗುವವರನ್ನು ನೋಡಿದಾಗ ಈ ಮಾತನ್ನು ಹೇಳುತ್ತಾರೆ.

December 19, 2007

ತಾನು ಮಾಡುವ … (ಉತ್ತರ ಕನ್ನಡದ ಗಾದೆ – 108)

ತಾನು ಮಾಡುವ ಭಾಗ್ಯಕ್ಕೆ ನಡು ಕಾನಿಗೆ ಹೋಗಿದ್ದನು.

ಕಾನು ಎಂದರೆ ಕಾಡು. ನಡು ಕಾನು ಎಂದರೆ ಕಾಡಿನ ನಡುವೆ ಅಥವಾ ಕಾಡಿನ ಮಧ್ಯ ಭಾಗ ಮತ್ತು 'ಮಾಡು' ಎನ್ನುವುದನ್ನು ಪ್ರಾತರ್ವಿಧಿ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ವಿವರಿಸಲು ಮುಜುಗರ ಎನಿಸುತ್ತಿರುವುದರಿಂದ ಈ ಗಾದೆಯನ್ನು ನಿಮ್ಮ ಕಲ್ಪನೆಗೆ ಬಿಡುತ್ತಿದ್ದೇನೆ.

ನಾನು ಊಟಕ್ಕೆ ದೊಡ್ಡ plate ಬೇಕು ಎಂದು ಕಿರಿಕಿರಿ ಮಾಡಿದಾಗಲೆಲ್ಲಾ ಅಮ್ಮನಿಂದ ಇದನ್ನು ತಪ್ಪದೇ ಹೇಳಿಸಿಕೊಳ್ಳುತ್ತಿದ್ದೆ. 'ತಿನ್ನುವುದು ಕೋಳಿ ಕೆದರಿದ ಹಾಗಾದರೂ plate ಮಾತ್ರ ದೊಡ್ಡದು ಬೇಕು ನೋಡು ನಿನಗೆ. ತಾನು ಮಾಡುವ ಭಾಗ್ಯಕ್ಕೆ......'ಎಂದು.

December 18, 2007

ಬಾಗಿಲು ಹಾಕಿದರೆ … (ಉತ್ತರ ಕನ್ನಡದ ಗಾದೆ – 107)

ಬಾಗಿಲು ಹಾಕಿದರೆ ಒಂದೇ ದೂರು, ಬಾಗಿಲು ತೆಗೆದರೆ ನಾ ನಾ ದೂರು.

ಯಾರಾದರೂ ಬಂದು ಬಾಗಿಲು ಬಡಿದು ಒಳಗೆ ಬರಲಾ ಎಂದು ಕೇಳಿದಾಗ, ಬೇಡ ಎಂದು ಬಾಗಿಲು ಹಾಕಿಬಿಟ್ಟರೆ ನಿಮ್ಮ ಮೇಲೆ ಬರುವ ದೂರು ಒಂದೇ- ಬಾಗಿಲು ಹಾಕಿಬಿಟ್ಟ ಎಂದು. ಅದೇ ಬಾಗಿಲು ತೆಗೆದು ಒಳಗೆ ಬರಲು ಅನುಮತಿ ಕೊಟ್ಟರೆ, ಜೊತೆಯಲ್ಲಿರುತ್ತಾನೆ. ನಂತರ ನಿಮ್ಮ ಬಗ್ಗೆ ಹಲವಾರು ದೂರುಗಳನ್ನು ಹೇಳತೊಡಗುತ್ತಾನೆ.

ಯಾರಾದರೂ ನಿಮ್ಮ ಬಳಿ ಸಹಾಯ ಕೇಳಿದಾಗ, 'ಸಾಧ್ಯವಿಲ್ಲ' ಎಂದು ಹೇಳಿದರೆ ಒಂದೇ ದೂರನ್ನು ಕೇಳಿಸಿಕೊಳ್ಳುತ್ತೀರಿ. ಆದರೆ ಸಹಾಯ ಮಾಡುತ್ತಾ ಹೋದರೆ ಅವನ ನಿರೀಕ್ಷೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಮಾಡಿದ ಸಹಾಯದಲ್ಲಿ ತಪ್ಪನ್ನು ಹುಡುಕಿ ಹಲವಾರು ದೂರುಗಳನ್ನು ಹೇಳತೊಡಗುತ್ತಾನೆ ಎಂಬ ಸಂದರ್ಭದಲ್ಲಿ ಇದರ ಬಳಕೆಯನ್ನು ಕಾಣಬಹುದು.

December 17, 2007

Creativity

Does creativity have a limit?... Have you ever seen a cat carrying its kitten?... Two unrelated questions…. 'ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು...ಎತ್ತಣದಿಂದ ಎತ್ತಣ ಸಂಬಂಧವಯ್ಯಾ' ಎಂದು ಕೇಳಿದಂತಿದೆಯಾ?
Look at the pictures above! This is an advertisement of a parcel service here in Tokyo. For their service, they have taken a cat carrying a kitten as logo. You would understand this better if you had ever seen a cat carrying its kitten. It takes the kitten to the other place so gently by holding the kitten’s skin over the neck without causing any harm. So these parcel service people say that they carry their customers’ goods as gently as a cat carries its kitten. Hats off to the designer of this logo!! Now do you agree with me that creativity does not have a limit?

ಹೆಳೆ ಇಲ್ಲದೇ … (ಉತ್ತರ ಕನ್ನಡದ ಗಾದೆ – 105 ಮತ್ತು 106)

ಹೆಳೆ ಇಲ್ಲದೇ ಅಳುವವನ ಹೆಂಡತಿ ಸತ್ತು ಹೋಗಿದ್ದಳಂತೆ.

ಹೆಳೆ ಎಂದರೆ ನೆಪ. ಅವನು ಮೊದಲೇ ಕಾರಣವಿಲ್ಲದೇ, ನೆಪವಿಲ್ಲದೇ ಅಳುತ್ತಲೇ ಇರುತ್ತಾನೆ. ಈಗಂತೂ ಹೆಂಡತಿಯೂ ಸತ್ತು ಹೋಗಿದ್ದರಿಂದ ಅಳುತ್ತಾನೆ, ಸಕಾರಣದಿಂದ.

ಏನೂ ಕಾರಣವಿಲ್ಲದೆಯೇ ಕೆಲವರು ಕೊರಗುವುದುಂಟು. ಅಂತಹವರಿಗೆ ಕಾರಣ ಸಿಕ್ಕಿದರಂತೂ ಕೇಳುವುದೇ ಬೇಡ. ಅಂತವರನ್ನು ಕುರಿತು ಇರುವ ಗಾದೆ ಇದು. ಇದೇ ಅರ್ಥದಲ್ಲಿ ಬಳಸುವ ಇನ್ನೊಂದು ಗಾದೆ ಎಂದರೆ ಅಳುವವನ ಮೈಮೇಲೆ ಗೋಡೆ ಬಿದ್ದಂತೆ. ಏನೂ ಕಾರಣವಿಲ್ಲದೆಯೇ ಅಳುತ್ತಾನೆ. ಇನ್ನು ಗೋಡೆ ಮೈಮೇಲೆ ಬಿದ್ದರಂತೂ ಕೇಳುವುದೇ ಬೇಡ.

December 14, 2007

ಮಗಳೇ ಮಗಳೇ … (ಉತ್ತರ ಕನ್ನಡದ ಗಾದೆ – 103 ಮತ್ತು 104)

ಮಗಳೇ ಮಗಳೇ ಎಂದರೆ ಮನೆಯಿಡೀ ತೆವಳಿದ್ದಳು.

ಮಗಳೇ ಮಗಳೇ ಎಂದು ತೀರಾ ಮುದ್ದು ಮಾಡಿದರೆ ಎದ್ದು ಓಡಾಡಲೂ ಆಲಸಿಯಾಗಿ ಮನೆಯಿಡೀ ತೆವೆಳಿಕೊಂಡೇ ಇದ್ದಳಂತೆ. ಹಾಗಾಗಿ ಕೆಲಸವನ್ನೆಲ್ಲ ಉಳಿದವರೇ ಮಾಡಬೇಕಾಯಿತು.

ಯಾರನ್ನಾದರೂ ಅಗತ್ಯಕ್ಕಿಂತ ಜಾಸ್ತಿ ಮುದ್ದು ಮಾಡಿದರೆ ಕೈಲಾಗದವರಂತೆ ನಟಿಸಲು ಪ್ರಾರಂಭಿಸುತ್ತಾರೆ, ಆಲಸಿತನವನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು ಅರ್ಥ.

ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ- ಮಾಡುವವರನ್ನು ಕಂಡರೆ ನೋಡು ನನ್ನ ಸೇವೆ. ಯಾರಾದರೂ ಸೇವೆ ಮಾಡಲು ತಯಾರಿದ್ದರೆ ನಾನು ಎಷ್ಟು ಬೇಕಾದರೂ ಸೇವೆ ಮಾಡಿಸಿಕೊಳ್ಳಲು ತಯಾರಿದ್ದೇನೆ ಎಂದು ಅರ್ಥ.

December 13, 2007

ಹಾಕು ಮಣೆ… (ಉತ್ತರ ಕನ್ನಡದ ಗಾದೆ – 101 ಮತ್ತು 102)

ಹಾಕು ಮಣೆ, ನೂಕು ಮಣೆ, ತೋರು ಮಣೆ.

ಇನ್ನೊಬ್ಬರ ಮನೆಗೆ ಅವರಿಷ್ಟಕ್ಕೆ ವಿರುದ್ಧವಾಗಿ ಪದೇ ಪದೇ ಹೋದರೆ ಸಿಗುವ ಸತ್ಕಾರ ಇದು. ಮೊದಲನೆಯ ಸಲ ಹೋದಾಗ ಎದ್ದು ಬಂದು ಮಣೆ ಹಾಕಿ ಕುಳಿತುಕೋ ಎನ್ನುತ್ತಾರೆ. ಮತ್ತೆ ಮತ್ತೆ ಹೋಗತೊಡಗಿದರೆ ಕುಳಿತಲ್ಲಿಂದಲೇ ಮಣೆಯನ್ನು ನೂಕಿ ಕುಳಿತುಕೋ ಎನ್ನುತ್ತಾರೆ. ಇನ್ನೂ ದಿನ ಕೆಳೆದಂತೆ ಪುನಃ ಪುನಃ ಹೋಗತೊಡಗಿದರೆ ಮಣೆ ಇರುವ ಜಾಗವನ್ನು ತೋರಿಸಿ, ಹಾಕಿಕೊಂಡು ಕುಳಿತುಕೋ ಎನ್ನುತ್ತಾರೆ.

ಇಂಥದೇ ಇನ್ನೊಂದು ಗಾದೆ- ಹೋಗು ಎನ್ನಲಾರದೇ ಹೊಗೆ ಹಾಕಿದರು.
ಹೋಗು ಎಂದು ಬಾಯಿ ಬಿಟ್ಟು ಹೇಳಲು ಆಗುತ್ತಿಲ್ಲ, ಆದರೆ ಕಳುಹಿಸಬೇಕಾಗಿದೆ ಅದಕ್ಕಾಗಿ ಹೊಗೆ ಹಾಕಿ ಓಡಿ ಹೋಗುವಂತೆ ಮಾಡುತ್ತಾರೆ!

December 12, 2007

ಬೇಡಿಕೊಂಡು ಬಂದ … (ಉತ್ತರ ಕನ್ನಡದ ಗಾದೆ – 100)

ಬೇಡಿಕೊಂಡು ಬಂದ ಅಕ್ಕಿಯಲ್ಲಿ ಬೆಕ್ಕು ಉಚ್ಚೆ ಮಾಡಿತ್ತು.

ಮೊದಲೇ ಮನೆಯಲ್ಲಿ ಅಕ್ಕಿಯಿಲ್ಲ. ಹೇಗೋ ಬೇಡಿಕೊಂಡು ಬಂದು ಸ್ವಲ್ಪ ಅಕ್ಕಿಯನ್ನು ಕೂಡಿಹಾಕಿದರೆ ಅದರಲ್ಲಿ ಬೆಕ್ಕು ಉಚ್ಚೆ ಮಾಡಿಬಿಟ್ಟಿತು.

ಕಷ್ಟಪಟ್ಟು ಕೂಡಿಹಾಕಿಕೊಂಡ ವಸ್ತುವನ್ನು ಇನ್ಯಾರಾದರೂ ತೆಗೆದುಕೊಂಡರೆ ಅಥವಾ ಹಾಳು ಮಾಡಿದರೆ ಈ ಮಾತು ಸರಿಹೋಗುತ್ತದೆ. ಮಾಡಿದ ಅಡುಗೆ ಸ್ವಲ್ಪವೇ ಇದ್ದಾಗ ಯಾರಾದರೂ (ಸಾಮಾನ್ಯವಾಗಿ ಮಕ್ಕಳು) ಅದನ್ನು ಬೀಳಿಸಿ ಚೆಲ್ಲಿ ಹಾಕಿದಾಗ ಈ ಮಾತನ್ನು ಹೇಳಿಸಿಕೊಳ್ಳುವುದುಂಟು.

December 11, 2007

ಬರಗಾಲದಲ್ಲಿ… (ಉತ್ತರ ಕನ್ನಡದ ಗಾದೆ – 99)

ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.

ಮೊದಲೆಂದೂ ಉಣ್ಣಲು ಆಸಕ್ತಿ ತೋರಿಸದ ಮಗ ಬರಗಾಲ ಬಂದೊಡನೆಯೇ ಉಣ್ಣಲು ಕಲಿಯತೊಡಗಿದ್ದ.

ಯಾವುದಾದರೂ ವಸ್ತುವಿನ ಕೊರತೆಯಿದ್ದಾಗ ಅದು ಬೇಕೆಂದು ಯಾರಾದರೂ ಕೇಳಿದರೆ ಈ ಗಾದೆ ಅನ್ವಯಿಸುತ್ತದೆ. ಸಿಹಿ ತಿಂಡಿಗಳನ್ನು ತಿನ್ನಲು ಎಂದೂ ಹೆಚ್ಚು ಆಸಕ್ತಿ ತೊರದ ನನ್ನ ತಮ್ಮ ಚಿಕ್ಕವನಿದ್ದಾಗ, ನೆಂಟರು ಬಂದಾಗ ಅದರಲ್ಲೂ ವಿಶೇಷವಾಗಿ ತಿಂಡಿ ಕಡಿಮೆಯಾಗಬಹುದು ಎಂಬ ಆತಂಕವಿದ್ದಾಗ ಅದನ್ನು ತಿನ್ನುತ್ತೇನೆಂದು ಕೇಳುತ್ತಿದ್ದ. ಆಗ ಅಮ್ಮ ಅವನಿಗೆ ಈ ಮಾತನ್ನು ಹೇಳುತ್ತಿದ್ದುದು ಇಂದೂ ಕೂಡ ನಮಗಿಬ್ಬರಿಗೂ ನೆನಪಿದೆ!!

December 10, 2007

ನನಗೂ ಸಾಕಾಗಿತ್ತು … (ಉತ್ತರ ಕನ್ನಡದ ಗಾದೆ – 98)

ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು.

ನನಗೂ ಅಲ್ಲಿರುವುದು ಬೇಕಾಗಿರಲಿಲ್ಲ. ಆದರೂ ಸುಮ್ಮನಿದ್ದೆ. ಅಷ್ಟರಲ್ಲಿ ನಾಯಕರೂ ಛೀ ಎಂದು ಹೀಯಾಳಿಸಿದರು. ತಕ್ಷಣ ಹೊರಬಿದ್ದು ಬಂದೆ.

ಅವನಿಗೆ ಯಾವುದೋ ಒಂದು ಸ್ಥಳದಿಂದ ಅಥವಾ ವ್ಯವಸ್ಥೆಯಿಂದ ಅಥವಾ ವ್ಯಕ್ತಿಯಿಂದ ದೂರವಾಗುವ ಮನಸ್ಸಿದೆ. ಆದರೆ ನಿರ್ಧಾರ ಮಾಡಲು ಆಗುತ್ತಿಲ್ಲ. ಅಷ್ಟರಲ್ಲಿ ಆ ವ್ಯವಸ್ಥೆ / ವ್ಯಕ್ತಿಯೇ ಅವನನ್ನು ದೂರಮಾಡಿಕೊಳ್ಳಲು ತಯಾರಿ ನಡೆಸಿದೆ/ ನಡೆಸಿದ್ದಾನೆ. ಅವನು ತಕ್ಷಣ ಹೊರಬಿದ್ದು ಬಂದು ಈ ಮಾತನ್ನು ಹೇಳುತ್ತಾನೆ.

December 7, 2007

ನಾವೇ ಸಾಯಬೇಕು … (ಉತ್ತರ ಕನ್ನಡದ ಗಾದೆ – 95, 96 ಮತ್ತು 97)

ನಾವೇ ಸಾಯಬೇಕು ಸ್ವರ್ಗ ಕಾಣಬೇಕು.

ಬೇರೆಯವರು ಸತ್ತರೆ ನಮಗೆ ಸ್ವರ್ಗ ಸಿಗುವುದಿಲ್ಲ. ನಾವು ಸತ್ತರೆ ಮಾತ್ರ ಸ್ವರ್ಗವನ್ನು ಕಾಣಲು ಸಾಧ್ಯ.

ಬೇರೆಯವರನ್ನು ನಂಬಿ ಕುಳಿತರೆ ನಮ್ಮ ಕೆಲಸ ಆಗುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು ಎಂಬುದು ಇದರ ಅರ್ಥ.

ಹೆಚ್ಚು ಕಡಿಮೆ ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಮಾತುಗಳೆಂದರೆ, ನಮ್ಮ ತಲೆಗೆ ನಮ್ಮ ಕೈ. ನಮಗೆ ಸಮಸ್ಯೆಗಳು ಬಂದಾಗ ನಮ್ಮ ತಲೆಯ ಮೇಲೆ ನಾವೇ ಕೈ ಹೊತ್ತುಕೊಳ್ಳಬೇಕೇ ವಿನಃ ಬೇರೆಯವರು ನಮ್ಮ ತಲೆಯ ಮೇಲೆ ಕೈ ಹೊರಿಸುವುದಿಲ್ಲ. ಅಂದರೆ ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳಬೇಕು.

ನಮಗೆ ನಾವು, ಗೋಡೆಗೆ ಮಣ್ಣು. ಮಣ್ಣಿನಿಂದಾದ ಗೋಡೆ ಹೇಗೆ ತನ್ನಷ್ಟಕ್ಕೇ ತಾನು ಭದ್ರವಾಗಿ ನಿಂತಿರುತ್ತದೆಯೋ ಹಾಗೆಯೇ ನಮ್ಮಷ್ಟ್ಟಕ್ಕೇ ನಾವು ಭದ್ರವಾಗಿ ನಿಲ್ಲಬೇಕು, ಇತರರು ಸಹಾಯ ಮಾಡಲಾರರು ಎಂದು ಅರ್ಥ.

December 6, 2007

ನಾನೂ ನಾಗಪ್ಪನೂ … (ಉತ್ತರ ಕನ್ನಡದ ಗಾದೆ – 94)

ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.

ನಾಗಪ್ಪ ಎಂದರೆ ಇಲ್ಲಿ ಹಾವು ಎಂದು ಅರ್ಥ. ನಿಜವಾಗಿ ಕಚ್ಚಿದವನು ನಾಗಪ್ಪ. ಹೇಳುವಾಗ ನಾನೂ ಮತ್ತು ನಾಗಪ್ಪನೂ ಸೇರಿ ಕಚ್ಚಿದೆವು ಎಂದು ಹೇಳಲಾಗಿದೆ.

ತಾನೇನೂ ಮಾಡದಿದ್ದರೂ ಕೆಲಸ ಆದ ಮೇಲೆ ತಾನೂ ಕೆಲಸದಲ್ಲಿ ಶಾಮೀಲಾಗಿದ್ದೆ, ತಾನು ಮತ್ತು ಇನ್ನೊಬ್ಬರು ಕೂಡಿ ಕೆಲಸ ಮಾಡಿದೆವು ಎಂದು ಹೇಳಿಕೊಳ್ಳುವವರ ಬಗೆಗಿನ ಮಾತು ಇದು. ಆದರೆ ನಿಜವಾಗಿ ಕೆಲಸವನ್ನು ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ!

December 5, 2007

ನೆತ್ತಿಯ ಮೇಲೆ ಬಾಯಿ … (ಉತ್ತರ ಕನ್ನಡದ ಗಾದೆ – 93)

ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.

ಗಂಟಲ ಮೇಲೆಯೇ ಬಾಯಿ ಇರುವುದರಿಂದ ಕಡಿಮೆ ಊಟ ಮಾಡಬೇಕಾಗುತ್ತದೆ. ಅದೇ ಬಾಯಿ ನೆತ್ತಿಯ ಮೇಲೆ ಇದ್ದಿದ್ದರೆ ಇನ್ನೂ ಹೆಚ್ಚು ಊಟ ಮಾಡಬಹುದಾಗಿತ್ತು.

ಹಣ ಗಳಿಸಲು ಇರುವ ಎಲ್ಲಾ ಮಾರ್ಗಗಳನ್ನೂ ಉಪಯೋಗಿಸಿದ ನಂತರವೂ ಹೊಸ ಮಾರ್ಗಕ್ಕಾಗಿ ಹಾತೊರೆಯುವವರನ್ನು ಕುರಿತು ಮಾಡಲಾದ ಗಾದೆ ಇದು. ಕೆಲವೊಮ್ಮೆ ತೀರಾ ಕಾಂಜೂಸಿ ವ್ಯಕ್ತಿಗಳ ಬಗ್ಗೆಯೂ ಬಳಸುವುದುಂಟು ಏಕೆಂದರೆ ಅವರು ಇನ್ನೂ ಹಣ ಉಳಿಸುವುದು ಹೇಗೆ ಎಂದು ಹಾತೊರೆಯುತ್ತಿರುತ್ತಾರೆ.

December 4, 2007

ಕುಂಬಳಕ್ಕೆ ಹೋಗುವುದರೊಳಗೇ … (ಉತ್ತರ ಕನ್ನಡದ ಗಾದೆ – 92)

ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.

ಕುಂಬಳ ಎಂದರೆ ಕರ್ನಾಟಕ-ಕೇರಳದ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಚಾಲ್ತಿಯಲ್ಲಿರುವ ಪ್ರದೇಶ. ಇದನ್ನು ಕುಂಬಳ ಸೀಮೆ ಎನ್ನುವುದು ರೂಢಿ. ಉತ್ತರ ಕನ್ನಡದ ಹುಡುಗರಿಗೆ ಕೆಲವೊಮ್ಮೆ ಇಲ್ಲಿಂದ ಹೆಣ್ಣು ತರುವುದೂ ಇದೆ.ಈ ಕುಂಬಳ ಪ್ರದೇಶದ ಜನರು ಹಿಂದಿನ ಕಾಲದಲ್ಲಿ ತಮ್ಮ ಕಿವಿಯನ್ನು ಹರಿದುಕೊಂಡಿರುತ್ತಿದ್ದರಂತೆ. ಅಂದರೆ ಕಿವಿಗೆ ಒಲೆ ಹಾಕಿಕೊಳ್ಳಲೆಂದು ಮಾಡಿರುವ ತೂತನ್ನು ತುಂಬಾ ದೊಡ್ಡದಾಗಿ ಮಾಡಿಕೊಂಡಿರುತ್ತಿದ್ದರು ಎಂದು ಕೇಳಿದ್ದೇನೆ. ಇತರ ಜನರು ಅಲ್ಲಿಗೆ ಹೋಗಬೇಕಾದ ಅಗತ್ಯ ಬಂದರೆ ಹೋಗುವ ಮೊದಲೇ ಕಿವಿ ಹರಿದುಕೊಳ್ಳುವ ಅಗತ್ಯವಿಲ್ಲ. ಅಲ್ಲಿ ಹೋಗಿ ನೋಡಿ, ಅಗತ್ಯ ಬಿದ್ದರೆ ಮಾತ್ರ ಹರಿದುಕೊಂಡರೆ ಸಾಕು.

ಏನಾದರೂ ಕೆಲಸವನ್ನು ಮಾಡುವಾಗ ಅಗತ್ಯವಿಲ್ಲದಿದ್ದರೂ ಮೊದಲೇ ಮಾಡಿಬಿಡುವುದು, ಆತವಾ ಯಾರಾದರೂ ಒಂದು ವಿಷಯವನ್ನು ವಿವರಿಸುತ್ತಿರುವಾಗ ಅವರಿಗೆ ಹೇಳಲೂ ಅವಕಾಶ ಕೊಡದೇ ಪ್ರಶ್ನೆ ಕೇಳಿದಾಗ ಈ ಮಾತನ್ನು ಹೇಳುತ್ತಾರೆ. ಬೇರೆಯವರಿಗೆ ವಿವರಿಸಲು ಬಿಟ್ಟು, ಅವರು ಮುಗಿಸಿದ ನಂತರ ಅಗತ್ಯವಿದ್ದರೆ ಮಾತ್ರ ಪ್ರಶ್ನಿಸಿದರೆ ಈ ಗಾದೆಯಿಂದ ತಪ್ಪಿಸಿಕೊಳ್ಳಬಹುದು!

December 3, 2007

ಒಲೆಯಿಂದ ಮೇಲೆ … (ಉತ್ತರ ಕನ್ನಡದ ಗಾದೆ – 91)

ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.

ಈ ಎರಡರಲ್ಲಿ ಯಾವುದು ಆದರೂ ಅನಾಹುತ ತಪ್ಪಿದ್ದಲ್ಲ. ಒಲೆಯಿಂದ ಮೇಲೆ ಬೆಂಕಿ ಆದರೆ ಈಡೀ ಮನೆಗೇ ಬೆಂಕಿ ಹೊತ್ತಿಕೊಳ್ಳಬಹುದು. ತೀರಿಸಲಾರದಷ್ಟು ಸಾಲವಾದರೂ ಸಂಕಷ್ಟಗಳು ಬರುತ್ತವೆ ಎಂಬ ಅರ್ಥವನ್ನು ಕೊಡುತ್ತದೆ.