November 7, 2007

ದೇಶದ ರಕ್ಷಕರು, ಭಕ್ಷಕರು

ಮೊನ್ನೆ ರಾತ್ರಿ ಇಲ್ಲಿ 10 ಘಂಟೆಯ ಸಮಯ. ಅಂದರೆ ನಮ್ಮ ದೇಶದಲ್ಲಿ ಸುಮಾರು ಸಂಜೆ 6:30. Gmail ನಿಂದ ಇನ್ನೇನು logout ಆಗಬೇಕೆನಿಸಿದರೂ ಯಾಕೋ ಒಂದು ಕ್ಷಣ ತಡೆದೆ. ತಕ್ಷಣ ನನ್ನ ತಮ್ಮ online ಕಾಣಿಸಿದ. ನಿಧಿ ಸಿಕ್ಕಿದ್ದಕ್ಕಿಂತ ಜಾಸ್ತಿ ಸಂತೋಷವಾಯಿತು. ನಾನೂ, ಅವನೂ ಭೇಟಿಯಾಗಿ ಹೆಚ್ಚು ಕಡಿಮೆ ಒಂದು ವರ್ಷವೇ ಕಳೆಯುತ್ತಾ ಬಂತು. ಈಗ ಮೂರು ತಿಂಗಳುಗಳ ಹಿಂದೆ ಅವನು ರಜೆಗೆಂದು ಊರಿಗೆ ಬರುವಷ್ಟರಲ್ಲಿ ನಾನು ನನ್ನದಲ್ಲದ ದೇಶಕ್ಕೆ ಬಂದು ತಲುಪಿದ್ದೆ. ಅವನು ಊರಿನಲ್ಲಿದ್ದಾಗ ಫೋನಿನಲ್ಲಿ ಮಾತಾಡಲು ಸಿಗುತ್ತಿದ್ದ. ಅವನು ರಜೆ ಮುಗಿಸಿ ಮನೆಯಿಂದ ತಿರುಗಿ ಹೊರಡುವ ದಿನ ಮಾತಾಡಿದ್ದು ಅಷ್ಟೇ. ನಂತರ ಎರಡು ತಿಂಗಳಿನಿಂದ ಅವನು phone, mail ಯಾವುದಕ್ಕೂ ಸಿಕ್ಕಿರಲಿಲ್ಲ. ಏಕೆಂದರೆ ಅವನಿರುವುದು ಮಣಿಪುರದ ಯಾವುದೋ ಒಂದು ಕಾಡಿನಲ್ಲೋ, ಕೊಳ್ಳದಲ್ಲೋ, ಗುಡ್ಡದಲ್ಲೋ...ಅವನು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್.

ಯಾಕೋ ಇತ್ತೀಚೆಗೆ ತುಂಬಾ ನೆನಪಾಗುತ್ತಿದ್ದ. ಅಕ್ಕ-ತಮ್ಮರಾದರೂ ನಾವಿರುವುದು ಸ್ನೇಹಿತರಂತೆ. ಸಣ್ಣ ವಿಷಯವನ್ನೂ ಬಿಡದೆ ಹಂಚಿಕೊಳ್ಳುವುದು ಚಿಕ್ಕವರಿಂದಾಗಿನಿಂದ ಬೆಳೆದು ಬಂದ ರೂಢಿ. ಒಮ್ಮೆ ಹೇಳುತ್ತಿದ್ದ, 'ಯಾಕೋ ಮನಸ್ಸಿಗೆ depression ಬಂದಿದೆ. ಓದಿದ್ದೆಲ್ಲಾ waste ಆಗ್ತಾ ಇದೆ. ಇಲ್ಲಿ ಮಾವೋ, ನಾಗಾ, ಉಲ್ಫಾ, ಬೋಡೋಗಳ ನಡುವೆ ಇರುವುದರ ಬದಲು ನನಗಿಷ್ಟವಾದ physics field ನಲ್ಲಿಯೇ ಮುಂದುವರಿದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿದೆ' ಎಂದು. ಆಗ ಏನೇನೋ ಹೇಳಿ ಅವನನ್ನು ಸಮಾಧಾನಿಸಿದ್ದೆ.

ಎರಡು ತಿಂಗಳುಗಳ ನಂತರ ಸಿಕ್ಕಿದ್ದು ಅವನಿಗೂ ನನಗಾದಷ್ಟೇ ಖುಷಿ ಆಗಿರಬೇಕು. ಅವನು ಗಡಿಬಿಡಿಯಲ್ಲಿದ್ದರೂ ಕೂಡ chat ಮಾಡತೊಡಗಿದೆವು. ಮಣಿಪುರದಿಂದ ಮಿಜ಼ೋರಮ್ ಗೆ ಹೊರಟಾಗ ದಾರಿಯಲ್ಲಿ ಸಿಕ್ಕ ಯಾವುದೋ internet browsing centre ನಲ್ಲಿ ಇದ್ದೇನೆ ಎಂದು ಹೇಳಿದ. ಅರ್ಧ ಘಂಟೆ chat ಮಾಡಿದ ಮೇಲೆ ಹೇಳಿದ, 'ನಾನು ಹೊರಡುತ್ತೇನೆ, ಈ city ಸರಿ ಇಲ್ಲ'. ನಾನು ಕೇಳಿದೆ, 'ಸರಿ ಇಲ್ಲ ಎಂದರೆ... terrorists?' ಅದಕ್ಕವನು ಅವನು ಹೇಳಿದ, 'not exactly. ಈ ರಾತ್ರಿ ನಾಲ್ಕು ಜನ ತಿರುಗಾಡ್ತಾರೆ ಅಂತ ಊಹೆ ಇದೆ. ನಮ್ಮನ್ನೂ ಕೂಡ target ಮಾಡಿರಬಹುದು'. ನಾನು ಕುಳಿತಲ್ಲೇ ಬೆವತು ಹೋದೆ. ತಕ್ಷಣ ಕೇಳಿದೆ, 'ನಿನ್ನ ಜೊತೆ ಎಷ್ಟು ಜನರಿದ್ದಾರೆ?' 'ನಾನು ಮತ್ತು ನನ್ನ unit ನ ಇನ್ನೊಬ್ಬ officer Captain Apte' ಎಂದ. 'Gun ಇದೆಯಾ?' ಎಂದು ಕೇಳಿದ್ದಕ್ಕೆ 'pistol ಇದೆ ಹುಷಾರ್‍ರ್‍ರ್‍ರ್ ' ಎಂದು ತಮಾಷೆ ಮಾಡಿದ ಮತ್ತು 'ನಾಳೆ ಮಿಜ಼ೋರಮ್ ನಲ್ಲಿ internet ಸಿಗಬಹುದು ಅಲ್ಲಿಂದ ಮತ್ತೆ ಸಿಗುತ್ತೇನೆ, ನಾನು ಆದಷ್ಟು ಬೇಗ ಇಲ್ಲಿಂದ ಹೊರಡುತ್ತೇನೆ, bye' ಎಂದು ಹೇಳಿ ಹೊರಟ.

Logout ಆದ ನಂತರ ಆ ರಾತ್ರಿ ಮುಗಿಯಲಾರದೇನೋ ಎನ್ನುವಷ್ಟು ದೀರ್ಘವಾಗಿತ್ತು. ಕಣ್ಮುಚ್ಚಿಕೊಂಡರೂ ಹೆಸರಿಗೆ ಮಾತ್ರವೂ ನಿದ್ದೆ ಬರಲಿಲ್ಲ. ನಿನ್ನೆ ಇಡೀ ದಿನ ಕಾಯುತ್ತಲೇ ಇದ್ದೆ. ಇಂದೂ ಕೂಡ ಕಾಯುತ್ತಿದ್ದೇನೆ. 'ನೀನೇಕೆ ಕೆಟ್ಟದ್ದನ್ನೇ ಆಲೋಚನೆ ಮಾಡುತ್ತೀಯಾ ಬಹುಶಃ ಅವನಿಗೆ internet ಸಿಕ್ಕಿರಲಿಕ್ಕಿಲ್ಲ' ಎಂದು ನನ್ನ ಗಂಡ ಕೊಟ್ಟ ಭರವಸೆಯನ್ನು ನಂಬಿದ್ದೇನೆ.

ನನಗೆ ಯಾವಾಗಲೂ ಅನಿಸುವುದುಂಟು, ಒಂದು ಕಡೆ ನನ್ನ ತಮ್ಮನೊಬ್ಬನೇ ಅಲ್ಲ, ಅವನಂತೆಯೇ ಸಾವಿರ... ಸಾವಿರ ಸೈನಿಕರು ತಮ್ಮ ಜೀವವನ್ನೂ ಲೆಕ್ಕಿಸದೇ ದೇಶದ ರಕ್ಷಣೆಯಲ್ಲಿ ತೊಡಗಿದ್ದಾರೆ. ಅವರಿಗಾಗಿ ಅವರ ತಂದೆ ತಾಯಂದಿರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನೊಂದು ಕಡೆ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ದೇಶವನ್ನು ಕಿತ್ತು ತಿನ್ನುತ್ತಿದ್ದಾರೆ. ಅಯ್ಯೋ ದೇವರೇ, ನಮ್ಮ ದೇಶದಲ್ಲಿ ಪ್ರಾಮಾಣಿಕತೆ ಏಕೆ ಸತ್ತು ಹೋಗುತ್ತಿದೆ?

ನನಗೆ ಹಿಂದಿ ಭಾಷೆ ಅರ್ಥವಾಗಲು ತೊಡಗಿದಾಗಿನಿಂದ ಲತಾ ಮಂಗೇಶ್ಕರ್ ಅವರು ಹಾಡಿರುವ ए मेरे वतन के लोगों ಹಾಡನ್ನು ಕೇಳಿದಾಗಲೆಲ್ಲಾ ಅಳುತ್ತೇನೆ, ಜನವರಿ 26, ಆಗಷ್ಟ್ 15 ರಂದು ದೂರದರ್ಶನ ತೋರಿಸುವ ಪಥಸಂಚಲನ ನೋಡಿಯೂ ಅಳುತ್ತೇನೆ. ನನಗೆ ಗೊತ್ತು ಮುಂದೂ ಕೂಡ ಅಳುತ್ತೇನೆ.

ನಾವೆಲ್ಲಾ ಸುಖವಾಗಿರುವಂತೆ ನೋಡಿಕೊಳ್ಳುವ ಆ ಅಸಂಖ್ಯಾತ ಸೈನಿಕರನ್ನು ದೇವರು ರಕ್ಷಿಸಲಿ. ದೇಶದ ಹೊರಗಿರುವ ಭಯೋತ್ಪಾದಕರಿಗೆ ಮತ್ತು ದೇಶದ ಒಳಗಡೆ ನಮ್ಮ ನಡುವೆಯೇ ಇದ್ದು ದೇಶವನ್ನು ಕಿತ್ತು ತಿನ್ನುತ್ತಿರುವ ಇರುವ ಭಯೋತ್ಪಾದಕರಿಗೆ ದೇವರು ಸದ್ಬುದ್ಧಿಯನ್ನು ದಯಪಾಲಿಸಲಿ.

4 comments:

Jagali bhaagavata said...

Very touching. The best one in your entire blog entries. I liked this very much. I liked the thought. It is not only relevant for politicians vs soldiers, but also for each one of us. Often times we take lot of things for granted, without realizing the sacrifices or contributions of others that make our life beautiful. Please convey my thanks and wishes to your brother.

Seema S. Hegde said...

@ Jagali Bhagavata,

Thank you so much and I completely agree with you. I don't know when I am going to catch him. It may be after one or two months! But I will convey your wishes to him without fail. That will surely make him feel good. Thanks a lot.

MD said...

ಸೀಮಾ,
ಒಳ್ಳೆ ಬರವಣಿಗೆ ಅಂತ ಹೇಗೆ ಹೇಳಲಿ, ಇದು ನೈಜ ಭಾವನೆಗಳ ಸಂಗ್ರಹ.
ನೀವು ಬರೆದ ಎಲ್ಲ ಭಾವನೆಗಳನ್ನು ನಾನು ಅನುಭವಿಸದಿದ್ದರೂ, ನೀವು ಬರೆದ ಒಂದು ಭಾವನೆ ನನ್ನದೂ ಆಗಿದೆ.
ಲತಾ ಹಾಡಿರುವ 'ಅಯ್ ಮೇರೆ ವತನ್ ಕೆ ಲೊಗೊಂ' ಹಾಡಿಗೆ ನಿಜವಾಗ್ಲೂ ಕಣ್ಣು ತುಂಬಿ ಬರುತ್ತವೆ. ಅದಕ್ಕೆ ಅವಳ ಎಲ್ಲ ಹಿಟ್ ಹಾಡುಗಳು ನನ್ನ ಐ-ಪಾಡ್ ನಲ್ಲಿದ್ದರೂ ಈ ಹಾಡನ್ನು ಸಂಗ್ರಹಿಸಲು ಧೈರ್ಯ ಸಾಲದು

Seema S. Hegde said...

MD,
ಧನ್ಯವಾದಗಳು.
Army ಯ slogan ಹೇಳುವಂತೆ, 'For your tomorrow, we gave our today'.
ಇನ್ನೇನೂ ಹೇಳಲು ತಿಳಿಯುತ್ತಿಲ್ಲ.
'जब तक थी साँस लड़े वो, फिर अपनी लाश बिचादि'
ಕಣ್ಣು ನೀರೂರುತ್ತಿದೆ.