November 21, 2007

ಅರಸ ಬರುವ ತನಕ … (ಉತ್ತರ ಕನ್ನಡದ ಗಾದೆ – 79)

ಅರಸ ಬರುವ ತನಕ ಹಲಸು ತಡೆಯುವುದಿಲ್ಲ.

ಹಲಸಿನ ಕಾಯಿ ಹಣ್ಣಾಗುವುದು ಮತ್ತು ಹಣ್ಣು ಕೊಳೆತು ಹೋಗುವುದು ಅದರ ಸ್ವತಂತ್ರ ಮತ್ತು ನೈಸರ್ಗಿಕ ಕ್ರಿಯೆ.
ಬರುವವನು ಅರಸನೇ ಆಗಿದ್ದರೂ ಆ ಹಲಸಿನ ಹಣ್ಣಾಗುವಿಕೆ, ಕೊಳೆಯುವಿಕೆಯಲ್ಲಿ ಬದಲಾವಣೆ ಇರುವುದಿಲ್ಲ.

ನಡೆಯುವಂಥ ಕೆಲಸಗಳು ತಮ್ಮ ಪಾಡಿಗೆ ತಾವು ನಡೆಯುತ್ತಲೇ ಇರುತ್ತವೆ, ಅವು ಯಾರಿಗಾಗಿಯೂ ಕಾಯುವುದಿಲ್ಲ ಎಂದು ಹೇಳುವಾಗ ಈ ಗಾದೆ ಬಳಸಲ್ಪಡುತ್ತದೆ.

No comments: