November 29, 2007

ನಾಯಿ ತೆಗೆದುಕೊಂಡು ಹೋಗಿ … (ಉತ್ತರ ಕನ್ನಡದ ಗಾದೆ – 87, 88 ಮತ್ತು 89)

ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತ್ತು.

ದಂಡಿಗೆ ಎಂದರೆ ಸಿಂಹಾಸನ. ನಾಯಿಯನ್ನು ಸಿಂಹಾಸಾನದ ಮೇಲೆ ಕೂರಿಸಿದರೂ ಅದಕ್ಕೆ ಸಿಂಹಾಸಾನದ ಬೆಲೆ ಗೊತ್ತಗುವುದಿಲ್ಲ. ಹೊಲಸು ಕಂಡ ತಕ್ಷಣ ಅದು ಜಿಗಿದು ಹಾರಿ ಬಿಡುತ್ತದೆ.

ಯೋಗ್ಯತೆ ಇಲ್ಲದವರಿಗೆ ಅಧಿಕಾರ ಅಥವಾ ವಸ್ತುಗಳನ್ನು ಕೊಟ್ಟರೆ ಅವರಿಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಅವರು ಪುನಃ ತಮ್ಮ ಹಳೆಯ ಗುಣಗಳನ್ನೇ ಅನುಸರಿಸುತ್ತಾರೆ ಎಂಬ ಅರ್ಥ.

ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಗಾದೆಗಳೆಂದರೆ- ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು ಮತ್ತು ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.

No comments: