August 9, 2007

ಹನ್ನೊಂದು ಹೊನ್ನಿನ ಪುರಾಣಿಕರ ಕಥೆ

'ಪಾಪಿ ಸಮುದ್ರ ಕ್ಕೆ ಹೋದರೂ ಮೊಳಕಾಲು ನೀರು'. ಇದು ಪ್ರಚಲಿತದಲ್ಲಿರುವ ಗಾದೆಮಾತು. ಇದಕ್ಕೆ ಪೂರಕ ಎನಿಸುವ ಈ ಕೆಳಗಿನ ಕಥೆಯನ್ನು ಓದಿ.ಹಣೆ ಬರಹವನ್ನು ಕೆಲವೊಮ್ಮೆ ನಂಬಬೇಕಾದಂತ ಪರಿಸ್ಥಿತಿ ಬಂದೊದಗುತ್ತದೆ.

ತ್ರೇತಾಯುಗದಲ್ಲಿ, ಒಂದು ಊರಿನಲ್ಲಿ ಒಬ್ಬ ಪುರಾಣಿಕರು (ಪೂಜಾರಿ) ಇದ್ದರು.
ಮನುಷ್ಯ ಸಹಜ ಧರ್ಮದಂತೆ ಅವರಿಗೂ ಸ್ವಲ್ಪ ಆಸೆ ಜಾಸ್ತಿ. ಯಾರ ಮನೆಯಲ್ಲಿ ಪೂಜೆ ಮಾಡಿದರೂ ಅವರಿಗೆ ಜನರು ಕೊಡುತ್ತಿದ್ದುದು ಹನ್ನೊಂದೇ ಹೊನ್ನು. ಆದ ಕಾರಣ, ಅವರಿಗೆ ಯಾವಾಗಲೂ ಬೇಜಾರಾಗುತ್ತಿತ್ತು. ಒಮ್ಮೆ ಅವರಿಗೆ ಯಾರೋ ಹೇಳಿದರು- "ನೀವು ರಾವಣನ ರಾಜ್ಯ ಲಂಕೆಗೆ ಏಕೆ ಹೋಗಬಾರದು? ರಾವಣ ತುಂಬಾ ಉದಾರಿ. ಕೇಳದಿದ್ದರೂ ದಾನ ಮಾಡುತ್ತಾನೆ" ಎಂದು. ಸರಿ, ಪುರಾಣಿಕರು ಲಂಕೆಯಲ್ಲಿ ಪೂಜೆ ಮಾಡಿದರು. ರಾವಣನೋ ತುಂಬಾ ಖುಷಿಯಿಂದ ಒಂದು ಚೀಲ ನಾಣ್ಯಗಳನ್ನು ದಾನವಾಗಿ ಕೊಟ್ಟ. ಪುರಾಣಿಕರಿಗೋ ಖುಷಿಯೋ ಖುಷಿ. ಮರಳಿ ತಮ್ಮ ದೇಶಕ್ಕೆ ಬಂದರು. ಲಂಕಾ ಪಟ್ಟನದಲ್ಲಿ ಕಬ್ಬಿಣವೇ ಆಭರಣ ಮತ್ತು ನಾಣ್ಯಗಳು ತಾನೇ, ಪುರಾಣಿಕರು ತಮಗೆ ದೊರೆತ ಒಂದು ಚೀಲ ಕಬ್ಬಿಣದ ನಾಣ್ಯಗಳನ್ನು ಮಾರಿ ಹೊನ್ನಿನ ನಾಣ್ಯಗಳನ್ನು ಕೊಂಡರು. ಆಗ ಅವರಿಗೆ ಸಿಕ್ಕಿದ್ದು ಕೇವಲ ಹನ್ನೊಂದು ಹೊನ್ನು.

ಹಿಂದಿಯಲ್ಲೂ ಇದಕ್ಕೊಂದು ಮಾತಿದೆ- समय से पेहले, नसीब से ज्ञादा कुछ नही मिलता

ಟಿಪ್ಪಣಿ: ಚೇತನಾ ರೋಹಿತ್ ಅವರು ತಮ್ಮ Blog ನಲ್ಲಿ ಬರೆದ ಕಥೆಯಿಂದ inspire ಆಗಿ ಈ ಕಥೆಯನ್ನು ಬರೆದಿದ್ದೇನೆ. My thanks are due to her.

2 comments:

Ranjana H said...

A beautiful blog with sundara gaade haagu sahaja soundaryada barahagalu..
heege bareeta iri..

Seema S. Hegde said...

@ Ranjana,
Thanks a lot :-)