February 12, 2008

ಕಂಡಿದ್ದು ಹೇಳೋ … (ಉತ್ತರ ಕನ್ನಡದ ಗಾದೆ – 158, 159 ಮತ್ತು 160)

ಕಂಡಿದ್ದು ಹೇಳೋ ಪಾರುಪತ್ಯಗಾರ ನನ್ನ ಮಠದಲ್ಲಿರಬೇಡ.

ಪಾರುಪತ್ಯಗಾರ ಎಂದರೆ ವ್ಯವಸ್ಥೆಯನ್ನೂ, ಆಗು ಹೋಗುಗಳನ್ನೂ ನೋಡಿಕೊಳ್ಳುವ ವ್ಯಕ್ತಿ. ನೀವು ಬೇಕಿದ್ದಲ್ಲಿ manager ಎಂದು ಕರೆಯಬಹುದು. ಕಂಡಿದ್ದನ್ನು ನಿಷ್ಠುರವಾಗಿ ಇದ್ದ ಹಾಗೆಯೇ ಹೇಳಿಬಿಡುವ ಪಾರುಪಾತ್ಯಾಗಾರನನ್ನು ಕಂಡರೆ ಎಲ್ಲರಿಗೂ ಅಸಹನೆ. ಮಠದ ಗುರುಗಳಿಗೂ ಕೂಡ. ಹಾಗಾಗಿ ಅವನನ್ನು ಮಠದಿಂದ ಓಡಿಸಿಬಿಡುತ್ತಾರೆ. ಸತ್ಯ ಮತ್ತು ನಿಷ್ಠುರ ವಾದಿಗಳ ಬಗ್ಗೆ ಜನರು ಅಸಹನೆ ತೋರಿದಾಗ ಈ ಗಾದೆಯನ್ನು ಹೇಳುತ್ತಾರೆ. ನಿಮಗೂ ಗೊತ್ತಲ್ಲ- ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದ ಮತ್ತು ಕಂಡದ್ದನ್ನು ಹೇಳಿದರೆ ಕೆಂಡದಂತಾ ಕೋಪ.

No comments: