February 8, 2008

ಕಲ್ಲಪ್ಪ ಗುಂಡಪ್ಪರ … (ಉತ್ತರ ಕನ್ನಡದ ಗಾದೆ – 154 ಮತ್ತು 155)

ಕಲ್ಲಪ್ಪ ಗುಂಡಪ್ಪರ ನಡುವೆ ಕಾಯಪ್ಪ ಚಟ್ನಿಯಾಗಿ ಹೋದ.

ರಬ್ಬುವ ಕಲ್ಲು ಮತ್ತು ಗುಂಡುಗಳ ನಡುವೆ ತೆಂಗಿನಕಾಯಿ ತುರಿ ಸಿಕ್ಕಿ ನುರಿದು ಚಟ್ನಿಯಾಗಿ ಹೋಗುತ್ತದೆ. ಅಂತೆಯೇ ಇಬ್ಬರ ಜಗಳ, ಮನಸ್ತಾಪಗಳ ನಡುವೆ ಮೂರನೆಯ ವ್ಯಕ್ತಿ ಸಿಕ್ಕಿ ನಲುಗಿ ಹೋಗುತ್ತಾನೆ. ಇದೇ ರೀತಿಯ ಇನ್ನೊಂದು ಗಾದೆ- ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು.

No comments: