August 20, 2008

ನಿತ್ಯ ಸಾಯುವವರಿಗೆ … (ಉತ್ತರ ಕನ್ನಡದ ಗಾದೆ – 184)

ನಿತ್ಯ ಸಾಯುವವರಿಗೆ ಅತ್ತು ಯಾರು ಪೂರೈಸುತ್ತಾರೆ?
ಸಾವನ್ನು ಪದೇ ಪದೇ ನೋಡಿದರೆ ಅದರ ಬಗ್ಗೆ ಅತೀವ ದುಃಖ ಉಂಟಾಗುವುದೇ ಇಲ್ಲವಂತೆ.
ಉದಾಹರಣೆಗೆ ಡಾಕ್ಟರುಗಳೇ ಸಾಕ್ಷಿ. ದಿನವೂ ಅದನ್ನೇ ನೋಡಿ ನೋಡಿ ಅವರು ಸಾವಿನ ಬಗ್ಗೆ ಅವರು indifferent ಆಗಿ ಬಿಟ್ಟಿರುತ್ತಾರೆ. ಒಂದು ಬಗೆಯ ನಿರ್ಲಿಪ್ತತೆಯನ್ನು ಹೊಂದಿಬಿಟ್ಟಿರುತ್ತಾರೆ.
ಅಂತೆಯೇ, ಬೇರೆಯವರಿಗೆ ಕಷ್ಟ ಬಂದಾಗ ಒಂದೆರಡು ಬಾರಿ ನಾನು ಅದಕ್ಕಾಗಿ ಕೊರುಗುತ್ತೇವೆ, ಸಹಾಯ ಮಾಡಲು ಹೋಗುತ್ತೇವೆ. ಆದರೆ ದಿನಾಲೂ ಅದೇ ಗೋಳು ಆದರೆ ನಾವು ನಂತರದಲ್ಲಿ ಅವರ ಕಷ್ಟಗಳ ಬಗ್ಗೆ ನಿರ್ಲಿಪ್ತತೆಯನ್ನು ಹೊಂದುತ್ತೇವೆ ಎಂಬ ಅರ್ಥ.

No comments: