ಒಬ್ಬನೇ(ಳೇ) ಇದ್ದರೆ ಹೆದರಿ ಸಾಯುತ್ತಾನೆ(ಳೆ), ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ.
ಒಟ್ಟಿಗಿಲ್ಲದಿದ್ದಾಗ ಕಸಿವಿಸಿಯಾಗುತ್ತದೆ, ಒಟ್ಟಿಗಿದ್ದರೆ ಯಾವಾಗಲೂ ಜಗಳವೇ ಎನ್ನುವ ಸಂದರ್ಭದಲ್ಲಿ ಇದನ್ನು ಉಪಯೋಗಿಸಬಹುದು. ಇದೇ ರೀತಿಯ ಇನ್ನೊಂದು ಗಾದೆ- ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.
November 28, 2008
November 26, 2008
ನಡುಗಿದವನನ್ನು (ಉತ್ತರ ಕನ್ನಡದ ಗಾದೆ – 227)
ನಡುಗಿದವನನ್ನು ನಡುಗಿಸಿತ್ತು, ಮುಡುಗಿದವನನ್ನು ಮುಡುಗಿಸಿತ್ತು, ಎದ್ದೋಡುವವನ ಜೊತೆ ಗುದ್ದಾಡಲಾರೆನೋ ಎಂದಿತ್ತು ಚಳಿ.
ಮುದುರಿಕೊಂಡು ಕುಳಿತಿದ್ದರೆ ಚಳಿ ಇನ್ನೂ ಜಾಸ್ತಿಯಾದಂತೆ ಅನಿಸುತ್ತದೆ. ಎದ್ದು ಕೆಲಸ ಮಾಡಿದರೆ ಅಷ್ಟೊಂದು ಚಳಿ ಎನಿಸುವುದಿಲ್ಲ ಎನ್ನುವಾಗ ಹೇಳುತ್ತಾರೆ. ಹೀಗೇ ಸ್ವಲ್ಪ flash‑back… ಚಿಕ್ಕವರಿದ್ದಾಗ (ಈಗ ಊರಿಗೆ ಹೋದಾಗಲೂ ಸಹ) ಚಳಿಗಾಲದಲ್ಲಿ ನಾನು, ರಘು ಎದ್ದ ಕೂಡಲೇ ಬಚ್ಚಲು ಒಲೆಯ ಮುಂದೆ ಕುಳಿತುಬಿಡುತ್ತಿದ್ದೆವು- ಇನ್ನೊಬ್ಬರು ಮೊದಲು ಸ್ನಾನಕ್ಕೆ ಹೋಗಲಿ ಎಂಬ ಆಶಯದಲ್ಲಿ, ವಾದಾಟದಲ್ಲಿ. ಅಪ್ಪ, ಅಮ್ಮರ ಕಣ್ಣು ತಪ್ಪಿಸಿ ಹಾಸಿಗೆಯಲ್ಲಿ ನಾವು ಮುಚ್ಚಿಟ್ಟು ಮಲಗಿಸಿಕೊಂಡ ಪಾಲಿ, ನಮ್ಮನೆಯ ಬೆಕ್ಕು ನಮಗಿಂತ ಮೊದಲೇ ಎದ್ದು ಹೋಗಿ ಅಮ್ಮನ ಕಾಲು ಸುತ್ತಿ, "ಥೋ ಯನ್ನ ವೈತರಣಿ ನದಿಯಲ್ಲಿ ಬೀಳ್ಸಿ ಹಾಕಡ್ದೇ" ಎಂದು ಬೈಸಿಕೊಂಡು, ಅಮ್ಮನ ಹಿಂದೆ ಮುಂದೆ ಎಡೆಬಿಡದೆ ಸುತ್ತಿ ಹಾಲು ಹಾಕಿಸಿಕೊಂಡು ಕುಡಿದು, ಕೈಕಾಲು, ಮುಖ ಎಲ್ಲ ನೆಕ್ಕಿಕೊಂಡು ಬಚ್ಚಲು ಒಲೆಯ ಮುಂದೆ ಗುರ್ರ್... ಗುರ್ರ್... ಎಂದು ಸದ್ದು ಮಾಡುತ್ತಾ ನಮಗಾಗಿ ಕಾಯುತ್ತಿರುತ್ತಿತ್ತು. ನಾನು, ರಘು ಅದರ ಜೊತೆ ಆಟವಾಡುತ್ತಾ, ಅಲ್ಲಿಗೆ ಬಂದು ನಮ್ಮ ಕಿವಿಗೆ ತಮ್ಮ ತಣ್ಣನೆಯ ಮೂಗನ್ನು ತಾಗಿಸುತ್ತಿದ್ದ ನಾಯಿಗಳು ಜ್ಯೂಲಿ ಮತ್ತು ಮೋಗ್ಲಿಯ ಜೊತೆ ಆಟವಾಡುತ್ತಾ ಕುಳಿತುಬಿಡುತ್ತಿದ್ದೆವು. ಅಜ್ಜ ನಮ್ಮ ಜೊತೆಯೇ ಕುಳಿತಿರುತ್ತಿದ್ದರು. ಅಮ್ಮ ಅಜ್ಜನಿಗೆ ಅಲ್ಲಿಯೇ ಚಹಾ ತಂದು ಕೊಡುತ್ತಿದ್ದಳು. ಅಪ್ಪ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದರೆ ಅಮ್ಮ ಅಡುಗೆ ಮನೆಯಲ್ಲಿ ದೋಸೆಯ ತಯಾರಿಯಲ್ಲಿರುತ್ತಿದ್ದಳು. ನಾವು ಶಾಲೆಗೆ ಹೊತ್ತಾಗುತ್ತದೆ ಎಂಬ ಪರಿವೆಯಿಲ್ಲದೆ ಬೆಕ್ಕು, ನಾಯಿಗಳ ಜೊತೆ ಆಟವಾಡುವುದರಲ್ಲಿ ಕಳೆಯುತ್ತಿದ್ದೆವು. ಯಾರಾದರೂ ಮೊದಲು ಸ್ನಾನಕ್ಕೆ ಹೋಗಿ ಇಲ್ಲವಾದರೆ ಶಾಲೆಗೆ ತಡವಾಗುತ್ತದೆ ಎಂಬ ಮಾತು ಅಮ್ಮನಿಂದ ಬಂದರೆ ನಾವು 'ಚಳಿ' ಎಂಬ ನೆಪ ಒಡ್ಡುತ್ತಿದ್ದೆವು. ಆಗ ಅಜ್ಜ ಈ ಗಾದೆ ಹೇಳುತ್ತಿದ್ದರು. ಈಗ ಅಜ್ಜನೂ ಇಲ್ಲ... ಪಾಲಿ, ಜ್ಯೂಲಿ, ಮೋಗ್ಲಿ ಯಾರೂ ಇಲ್ಲ (ಅವುಗಳ ಜಾಗಕ್ಕೆ ಮುಮ್ಮಡಿ ಪಾಲಿ, ಮುಮ್ಮಡಿ ಜ್ಯೂಲಿ ಮತ್ತು ಇಮ್ಮಡಿ ಮೋಗ್ಲಿ ಬಂದಿದ್ದಾರೆ). ನಾನು, ರಘು ವರ್ಷಕ್ಕೊಮ್ಮೆ ಭೇಟಿಯಾಗುವುದು ಕೂಡ ಕಷ್ಟ.... Good old days... :(
ಮುದುರಿಕೊಂಡು ಕುಳಿತಿದ್ದರೆ ಚಳಿ ಇನ್ನೂ ಜಾಸ್ತಿಯಾದಂತೆ ಅನಿಸುತ್ತದೆ. ಎದ್ದು ಕೆಲಸ ಮಾಡಿದರೆ ಅಷ್ಟೊಂದು ಚಳಿ ಎನಿಸುವುದಿಲ್ಲ ಎನ್ನುವಾಗ ಹೇಳುತ್ತಾರೆ. ಹೀಗೇ ಸ್ವಲ್ಪ flash‑back… ಚಿಕ್ಕವರಿದ್ದಾಗ (ಈಗ ಊರಿಗೆ ಹೋದಾಗಲೂ ಸಹ) ಚಳಿಗಾಲದಲ್ಲಿ ನಾನು, ರಘು ಎದ್ದ ಕೂಡಲೇ ಬಚ್ಚಲು ಒಲೆಯ ಮುಂದೆ ಕುಳಿತುಬಿಡುತ್ತಿದ್ದೆವು- ಇನ್ನೊಬ್ಬರು ಮೊದಲು ಸ್ನಾನಕ್ಕೆ ಹೋಗಲಿ ಎಂಬ ಆಶಯದಲ್ಲಿ, ವಾದಾಟದಲ್ಲಿ. ಅಪ್ಪ, ಅಮ್ಮರ ಕಣ್ಣು ತಪ್ಪಿಸಿ ಹಾಸಿಗೆಯಲ್ಲಿ ನಾವು ಮುಚ್ಚಿಟ್ಟು ಮಲಗಿಸಿಕೊಂಡ ಪಾಲಿ, ನಮ್ಮನೆಯ ಬೆಕ್ಕು ನಮಗಿಂತ ಮೊದಲೇ ಎದ್ದು ಹೋಗಿ ಅಮ್ಮನ ಕಾಲು ಸುತ್ತಿ, "ಥೋ ಯನ್ನ ವೈತರಣಿ ನದಿಯಲ್ಲಿ ಬೀಳ್ಸಿ ಹಾಕಡ್ದೇ" ಎಂದು ಬೈಸಿಕೊಂಡು, ಅಮ್ಮನ ಹಿಂದೆ ಮುಂದೆ ಎಡೆಬಿಡದೆ ಸುತ್ತಿ ಹಾಲು ಹಾಕಿಸಿಕೊಂಡು ಕುಡಿದು, ಕೈಕಾಲು, ಮುಖ ಎಲ್ಲ ನೆಕ್ಕಿಕೊಂಡು ಬಚ್ಚಲು ಒಲೆಯ ಮುಂದೆ ಗುರ್ರ್... ಗುರ್ರ್... ಎಂದು ಸದ್ದು ಮಾಡುತ್ತಾ ನಮಗಾಗಿ ಕಾಯುತ್ತಿರುತ್ತಿತ್ತು. ನಾನು, ರಘು ಅದರ ಜೊತೆ ಆಟವಾಡುತ್ತಾ, ಅಲ್ಲಿಗೆ ಬಂದು ನಮ್ಮ ಕಿವಿಗೆ ತಮ್ಮ ತಣ್ಣನೆಯ ಮೂಗನ್ನು ತಾಗಿಸುತ್ತಿದ್ದ ನಾಯಿಗಳು ಜ್ಯೂಲಿ ಮತ್ತು ಮೋಗ್ಲಿಯ ಜೊತೆ ಆಟವಾಡುತ್ತಾ ಕುಳಿತುಬಿಡುತ್ತಿದ್ದೆವು. ಅಜ್ಜ ನಮ್ಮ ಜೊತೆಯೇ ಕುಳಿತಿರುತ್ತಿದ್ದರು. ಅಮ್ಮ ಅಜ್ಜನಿಗೆ ಅಲ್ಲಿಯೇ ಚಹಾ ತಂದು ಕೊಡುತ್ತಿದ್ದಳು. ಅಪ್ಪ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದರೆ ಅಮ್ಮ ಅಡುಗೆ ಮನೆಯಲ್ಲಿ ದೋಸೆಯ ತಯಾರಿಯಲ್ಲಿರುತ್ತಿದ್ದಳು. ನಾವು ಶಾಲೆಗೆ ಹೊತ್ತಾಗುತ್ತದೆ ಎಂಬ ಪರಿವೆಯಿಲ್ಲದೆ ಬೆಕ್ಕು, ನಾಯಿಗಳ ಜೊತೆ ಆಟವಾಡುವುದರಲ್ಲಿ ಕಳೆಯುತ್ತಿದ್ದೆವು. ಯಾರಾದರೂ ಮೊದಲು ಸ್ನಾನಕ್ಕೆ ಹೋಗಿ ಇಲ್ಲವಾದರೆ ಶಾಲೆಗೆ ತಡವಾಗುತ್ತದೆ ಎಂಬ ಮಾತು ಅಮ್ಮನಿಂದ ಬಂದರೆ ನಾವು 'ಚಳಿ' ಎಂಬ ನೆಪ ಒಡ್ಡುತ್ತಿದ್ದೆವು. ಆಗ ಅಜ್ಜ ಈ ಗಾದೆ ಹೇಳುತ್ತಿದ್ದರು. ಈಗ ಅಜ್ಜನೂ ಇಲ್ಲ... ಪಾಲಿ, ಜ್ಯೂಲಿ, ಮೋಗ್ಲಿ ಯಾರೂ ಇಲ್ಲ (ಅವುಗಳ ಜಾಗಕ್ಕೆ ಮುಮ್ಮಡಿ ಪಾಲಿ, ಮುಮ್ಮಡಿ ಜ್ಯೂಲಿ ಮತ್ತು ಇಮ್ಮಡಿ ಮೋಗ್ಲಿ ಬಂದಿದ್ದಾರೆ). ನಾನು, ರಘು ವರ್ಷಕ್ಕೊಮ್ಮೆ ಭೇಟಿಯಾಗುವುದು ಕೂಡ ಕಷ್ಟ.... Good old days... :(
November 25, 2008
ಸ್ವಾರ್ಥವೂ ಆಗಬೇಕು (ಉತ್ತರ ಕನ್ನಡದ ಗಾದೆ – 225 ಮತ್ತು 226 )
ಸ್ವಾರ್ಥವೂ ಆಗಬೇಕು, ಸ್ವಾಮಿ ಸೇವೆಯೂ ಆಗಬೇಕು.
ಒಡೆಯನ ಸೇವೆ ಮಾಡುವ ನೆಪದಲ್ಲಿ ಸ್ವಕಾರ್ಯ ಸಾಧನೆ ಮಾಡಿಕೊಳ್ಳುವವರನ್ನು ಕುರಿತಾದ ಮಾತು ಇದು.
ಬೇರೆಯವರ ಹೆಳೆ, ತನ್ನ ಬೆಳೆ ಎಂದೂ ಕೂಡ ಹೇಳುತ್ತಾರೆ. ಹೆಳೆ ಎಂದರೆ ನೆಪ. ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತಾನು ಲಾಭ ಮಾಡಿಕೊಳ್ಳುತ್ತಾನೆ(ಳೆ) ಎಂಬ ಅರ್ಥ.
ಒಡೆಯನ ಸೇವೆ ಮಾಡುವ ನೆಪದಲ್ಲಿ ಸ್ವಕಾರ್ಯ ಸಾಧನೆ ಮಾಡಿಕೊಳ್ಳುವವರನ್ನು ಕುರಿತಾದ ಮಾತು ಇದು.
ಬೇರೆಯವರ ಹೆಳೆ, ತನ್ನ ಬೆಳೆ ಎಂದೂ ಕೂಡ ಹೇಳುತ್ತಾರೆ. ಹೆಳೆ ಎಂದರೆ ನೆಪ. ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತಾನು ಲಾಭ ಮಾಡಿಕೊಳ್ಳುತ್ತಾನೆ(ಳೆ) ಎಂಬ ಅರ್ಥ.
November 24, 2008
ಸೋರೆಯಿಂದ (ಉತ್ತರ ಕನ್ನಡದ ಗಾದೆ – 224)
ಸೋರೆಯಿಂದ ಏಳ (ಏಳುವುದಿಲ್ಲ), ಗುಂಜಿನಿಂದ ಬಿಡ (ಬಿಡುವುದಿಲ್ಲ).
ಸೋರೆ ಮತ್ತು ಗುಂಜು ಎರಡೂ ಹಲಸಿನ ಹಣ್ಣಿನೊಳಗಿನ ಭಾಗಗಳು.
ಹಲಸಿನ ತೊಳೆಯನ್ನು ಸೋರೆಯಿಂದ ಬಿಡಿಸತೊಡಗಿದರೆ ಗುಂಜಿಗೆ ಅಂಟಿಕೊಳ್ಳುತ್ತದೆ, ಗುಂಜಿನಿಂದ ಬಿಡಿಸತೊಡಗಿದರೆ ಸೋರೆಗೆ ಅಂಟಿಕೊಳ್ಳುತ್ತದೆ. ಯಾವ ಕೆಲಸವನ್ನು ಮಾಡಿದರೆ ಸರಿ ಎಂದು ಬಗೆಹರಿಯದೆ ಎರಡರ ನಡುವೆಯೂ ಹೊಯ್ದಾಡುತ್ತಿದ್ದರೆ ಈ ಮಾತು ಅನ್ವಯಿಸುತ್ತದೆ. ಒಮ್ಮೆ ಒಂದು ಸರಿ ಎನಿಸಿದರೆ ಮತ್ತೊಮ್ಮೆ ಇನ್ನೊಂದು ಸರಿ ಎನಿಸುತ್ತದೆ. ಉತ್ತರ ಕನ್ನಡದ ಹವ್ಯಕರಲ್ಲಿ ಇದಕ್ಕೆ 'ಹಲವರಿಯುವುದು' ಎಂಬ ವಿಶೇಷ ಶಬ್ದ ಇದೆ. ಅಂದರೆ ಹಲವಾರು ವಿಚಾರಗಳು ಸರಿ ಎನಿಸುತ್ತವೆ, ಯಾವುದನ್ನು ಅನುಸರಿಸುವುದು ಎಂದು ಗೊತ್ತಾಗುವುದಿಲ್ಲ.
ಸೋರೆ ಮತ್ತು ಗುಂಜು ಎರಡೂ ಹಲಸಿನ ಹಣ್ಣಿನೊಳಗಿನ ಭಾಗಗಳು.
ಹಲಸಿನ ತೊಳೆಯನ್ನು ಸೋರೆಯಿಂದ ಬಿಡಿಸತೊಡಗಿದರೆ ಗುಂಜಿಗೆ ಅಂಟಿಕೊಳ್ಳುತ್ತದೆ, ಗುಂಜಿನಿಂದ ಬಿಡಿಸತೊಡಗಿದರೆ ಸೋರೆಗೆ ಅಂಟಿಕೊಳ್ಳುತ್ತದೆ. ಯಾವ ಕೆಲಸವನ್ನು ಮಾಡಿದರೆ ಸರಿ ಎಂದು ಬಗೆಹರಿಯದೆ ಎರಡರ ನಡುವೆಯೂ ಹೊಯ್ದಾಡುತ್ತಿದ್ದರೆ ಈ ಮಾತು ಅನ್ವಯಿಸುತ್ತದೆ. ಒಮ್ಮೆ ಒಂದು ಸರಿ ಎನಿಸಿದರೆ ಮತ್ತೊಮ್ಮೆ ಇನ್ನೊಂದು ಸರಿ ಎನಿಸುತ್ತದೆ. ಉತ್ತರ ಕನ್ನಡದ ಹವ್ಯಕರಲ್ಲಿ ಇದಕ್ಕೆ 'ಹಲವರಿಯುವುದು' ಎಂಬ ವಿಶೇಷ ಶಬ್ದ ಇದೆ. ಅಂದರೆ ಹಲವಾರು ವಿಚಾರಗಳು ಸರಿ ಎನಿಸುತ್ತವೆ, ಯಾವುದನ್ನು ಅನುಸರಿಸುವುದು ಎಂದು ಗೊತ್ತಾಗುವುದಿಲ್ಲ.
November 22, 2008
ಸಾಲ ಮಾಡಿ (ಉತ್ತರ ಕನ್ನಡದ ಗಾದೆ – 222 ಮತ್ತು 223 )
ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
ಕೈಲಾಗದಿದ್ದರೂ ಸಾಲ ಮಾಡಿ ಓಲೆ ಮಾಡಿಸಿದರೆ ಮುಂದೆ ಆ ಸಾಲಕ್ಕೆ ಬಡ್ಡಿ ಬೆಳೆಯುತ್ತಾ ಹೋದಂತೆ ಓಲೆಯನ್ನು ಮಾರಿ ಬಡ್ಡಿಯನ್ನು ತೀರಿಸಬೇಕಾಗುತ್ತದೆ. ಆದರೆ ಸಾಲದ ಅಸಲು ಹಾಗೆಯೇ ಉಳಿದುಕೊಳ್ಳುತ್ತದೆ. ಅದಕ್ಕಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಇನ್ನೂ ಒಂದು ಮಾತಿದೆ ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು ಎಂದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇರುವ ಮಾತೆಂದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.
ಕೈಲಾಗದಿದ್ದರೂ ಸಾಲ ಮಾಡಿ ಓಲೆ ಮಾಡಿಸಿದರೆ ಮುಂದೆ ಆ ಸಾಲಕ್ಕೆ ಬಡ್ಡಿ ಬೆಳೆಯುತ್ತಾ ಹೋದಂತೆ ಓಲೆಯನ್ನು ಮಾರಿ ಬಡ್ಡಿಯನ್ನು ತೀರಿಸಬೇಕಾಗುತ್ತದೆ. ಆದರೆ ಸಾಲದ ಅಸಲು ಹಾಗೆಯೇ ಉಳಿದುಕೊಳ್ಳುತ್ತದೆ. ಅದಕ್ಕಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಇನ್ನೂ ಒಂದು ಮಾತಿದೆ ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು ಎಂದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇರುವ ಮಾತೆಂದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.
November 21, 2008
ಶಿದ್ದೆಯಂಥ (ಉತ್ತರ ಕನ್ನಡದ ಗಾದೆ – 221)
ಶಿದ್ದೆಯಂಥ ಮಕ್ಕಳಿದ್ದರೆ ಎದ್ದು ಗೇಯುವುದು ಬೇಡ.
'ಶಿದ್ದೆ' ಎಂದರೆ ಬಿದಿರಿನಿಂದ ಮಾಡಿದ ಅಕ್ಕಿ ಅಳೆಯಲು ಉಪಯೋಗಿಸುವ ಮಾಪು. ಅತ್ಯಂತ ಗಟ್ಟಿಯಾಗಿರುತ್ತದೆ. ತಳತಲಾಂತರಗಳಿಂದಲೂ ಮನೆಯಲ್ಲಿ ಇರುವಂಥದು. 'ಗೇಯುವುದು' ಎಂದರೆ ದುಡಿಮೆ ಮಾಡುವುದು.
ಸಮರ್ಥರಾದ ಮಕ್ಕಳಿದ್ದರೆ ಮುದಿಕಾಲಕ್ಕೆ ಕಷ್ಟಪಡುವ ಅಗತ್ಯವಿಲ್ಲ ಎಂಬ ಮಾತು ಇದು.
'ಶಿದ್ದೆ' ಎಂದರೆ ಬಿದಿರಿನಿಂದ ಮಾಡಿದ ಅಕ್ಕಿ ಅಳೆಯಲು ಉಪಯೋಗಿಸುವ ಮಾಪು. ಅತ್ಯಂತ ಗಟ್ಟಿಯಾಗಿರುತ್ತದೆ. ತಳತಲಾಂತರಗಳಿಂದಲೂ ಮನೆಯಲ್ಲಿ ಇರುವಂಥದು. 'ಗೇಯುವುದು' ಎಂದರೆ ದುಡಿಮೆ ಮಾಡುವುದು.
ಸಮರ್ಥರಾದ ಮಕ್ಕಳಿದ್ದರೆ ಮುದಿಕಾಲಕ್ಕೆ ಕಷ್ಟಪಡುವ ಅಗತ್ಯವಿಲ್ಲ ಎಂಬ ಮಾತು ಇದು.
November 20, 2008
ಮಂಡೆ ಹಿಡಿದರೂ (ಉತ್ತರ ಕನ್ನಡದ ಗಾದೆ – 220)
ಮಂಡೆ ಹಿಡಿದರೂ ಬೋಳು, ಕುಂಡೆ ಹಿಡಿದರೂ ಬೋಳು.
ಈ ಗಾದೆಯನ್ನು ಸಾಮಾನ್ಯವಾಗಿ ಗಂಡಸರು ಬೇಜವಾಬ್ದಾರಿತನವನ್ನು ತೋರಿಸಿದಾಗ ಹೆಂಗಸರು ಹೇಳುತ್ತಾರೆ. ಗಂಡಸರಿಗೆ ಯಾವುದೇ ನಿಯಮಕ್ಕೂ ಅಂಟಿಕೊಳ್ಳುವ ಅಗತ್ಯ ಇಲ್ಲ, ಹೆಚ್ಚು-ಕಮ್ಮಿ ಹೇಗೆ ಬದುಕಿದರೂ ನಡೆಯುತ್ತದೆ, ಯಾವುದಕ್ಕೂ ಗಂಡಸರು ಜಾಸ್ತಿ ತಲೆಕೆಡಿಸಿಕೊಳ್ಳುವವರಲ್ಲ ಎಂಬ ಅಭಿಪ್ರಾಯವನ್ನು ಗಂಡಸರ ಬಗ್ಗೆ ಹೇಳುವಾಗ ಬಳಸುತ್ತಾರೆ. To be on the safer side.... ಇದು ನನ್ನ ವೈಯ್ಯಕ್ತಿಕ ಅಭಿಪ್ರಾಯವಲ್ಲ, ಈ ರೀತಿಯ ಗಾದೆ ಇದೆ :-)
ಈ ಗಾದೆಯನ್ನು ಸಾಮಾನ್ಯವಾಗಿ ಗಂಡಸರು ಬೇಜವಾಬ್ದಾರಿತನವನ್ನು ತೋರಿಸಿದಾಗ ಹೆಂಗಸರು ಹೇಳುತ್ತಾರೆ. ಗಂಡಸರಿಗೆ ಯಾವುದೇ ನಿಯಮಕ್ಕೂ ಅಂಟಿಕೊಳ್ಳುವ ಅಗತ್ಯ ಇಲ್ಲ, ಹೆಚ್ಚು-ಕಮ್ಮಿ ಹೇಗೆ ಬದುಕಿದರೂ ನಡೆಯುತ್ತದೆ, ಯಾವುದಕ್ಕೂ ಗಂಡಸರು ಜಾಸ್ತಿ ತಲೆಕೆಡಿಸಿಕೊಳ್ಳುವವರಲ್ಲ ಎಂಬ ಅಭಿಪ್ರಾಯವನ್ನು ಗಂಡಸರ ಬಗ್ಗೆ ಹೇಳುವಾಗ ಬಳಸುತ್ತಾರೆ. To be on the safer side.... ಇದು ನನ್ನ ವೈಯ್ಯಕ್ತಿಕ ಅಭಿಪ್ರಾಯವಲ್ಲ, ಈ ರೀತಿಯ ಗಾದೆ ಇದೆ :-)
Subscribe to:
Posts (Atom)